ಗುರುವಾರ ರಾತ್ರಿ ಧಾರವಾಡಕ್ಕೆ ತೆರಳುವ ಮೊದಲು ಇಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಬಿಜೆಪಿಯವರು ಸಭಾಪತಿಗೆ ಪರಿಷತ್ ಒಳಗೆ ಬರಲು ಅವಕಾಶ ಕೊಡದೆ ಉಪಸಭಾಪತಿಯನ್ನು ಕುರ್ಚಿಯ ಮೇಲೆ ಕೂಡಿಸಿದ್ದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಕಾನೂನು ಹೋರಾಟ, ನೋಟಿಸ್, ಚರ್ಚೆ ಹೀಗೆ ಹಲವಾರು ದಾರಿಗಳಿದ್ದರೂ ಇವೆಲ್ಲವನ್ನು ಬಿಟ್ಟು ಬಿಜೆಪಿ ಗಲಾಟೆ ಮಾಡಿದ್ದು ಕಳಂಕ ತರುವಂಥದ್ದು’ ಎಂದರು.