ಪಿಲಿಕುಳದಲ್ಲೇ ಹುಟ್ಟಿದ್ದ ವಿಜಯಾ ಹುಲಿಗೆ ಎರಡೂವರೆ ವರ್ಷ ತುಂಬಿತ್ತು. ಇತರ ಹುಲಿಗಳ ಜೊತೆ ಇತ್ತೀಚೆಗೆ ನಡೆದ ಕಚ್ಚಾಟದಲ್ಲಿವಿಜಯಾ ತೀವ್ರ ಗಾಯಗೊಂಡಿತ್ತು. ಜೈವಿಕ ಉದ್ಯಾನದ ವೈದ್ಯಾಧಿಕಾರಿ ಡಾ.ವಿಷ್ಣುದತ್, ಡಾ.ಮಧುಸೂಧನ ಹಾಗೂ ಡಾ.ಯಶಸ್ವಿ ಅವರನ್ನು ಒಳಗೊಂಡ ಪಶುವೈದ್ಯರ ತಂಡವು ಈ ಹುಲಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. ಬಳಿಕ ಅದರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ ಹುಲಿಯ ಆರೋಗ್ಯ ಮತ್ತೆ ವ್ಯತ್ಯಯವಾಗಿತ್ತು ಎಂದು ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ ಭಂಡಾರಿ ತಿಳಿಸಿದ್ದಾರೆ.