ಬೆಳಗಾವಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾರ್ಚ್ 20ರಂದು ಕರ್ನಾಟಕದಲ್ಲಿ ಯುವಜನರಿಗೆ ದೊಡ್ಡ ಕೊಡುಗೆ ಘೋಷಣೆ ಮಾಡಲಿದ್ದಾರೆ. ಹೆದರಿರುವ ಬಿಜೆಪಿ ನಾಯಕರು ಅವರನ್ನು ತಡೆಯಲು ಪೊಲೀಸರನ್ನು ಉಪಯೋಗಿಸಿದ್ದಾರೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ ಕಾರಿದರು.