ಸೆ. 26ರಂದು ರಾತ್ರಿ 10.50ಕ್ಕೆ ವಿಧಾನ ಪರಿಷತ್ ಕಲಾಪ ಅಂತ್ಯಗೊಂಡಿತ್ತು. ಪರಿಷತ್ನಲ್ಲಿ ತಡರಾತ್ರಿ 1 ಗಂಟೆಯವರೆಗೂ ಕಲಾಪ ನಡೆದಿತ್ತು. ಆ ಬಳಿಕ ಕಲಾಪವನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಗಿತ್ತು. ಮಸೂದೆಗಳ ಅಂಗೀಕಾರ ಬಾಕಿ ಇರುವಾಗಲೇ ಕಲಾಪ ಮುಂದೂಡಿದ್ದಕ್ಕೆ ಟ್ವಿಟರ್ನಲ್ಲಿ ಆಕ್ಷೇಪಿಸಿದ್ದ ಸುರೇಶ್ ಕುಮಾರ್, ‘ಸಭಾಪತಿಯವರ ನಡೆ ನಿಗೂಢ, ಅಂಪೈರ್ ಎಂದೂ ಹೀಗಿರಬಾರದು‘ ಎಂದು ಟ್ವೀಟ್ ಮಾಡಿದ್ದರು.