ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಕುರಿತು ತನಿಖೆ ನಡೆಸಿದ್ದೇ ನಮ್ಮ ಸರ್ಕಾರ. ಹೀಗಾಗಿ, ಹಗರಣ ಬಯಲಿಗೆ ಬರಲು ಸಾಧ್ಯವಾಗಿದೆ. ಹಿಂದೆ ಪೊಲೀಸ್ ಇಲಾಖೆಯಲ್ಲಿ ಹಗರಣಗಳು ನಡೆದಿದ್ದರೂ ಯಾವ ಸರ್ಕಾರವೂ ತನಿಖೆಯನ್ನೇ ನಡೆಸಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮುಖಭಂಗ ಆಗಲು ಹೇಗೆ ಸಾಧ್ಯ? ತನಿಖೆ ನಡೆಸಿದ್ದೇ ನಮ್ಮ ಸರ್ಕಾರ ಎಂದು ಪುನರುಚ್ಚರಿಸಿದರು.
ಎಡಿಜಿಪಿ ಅಮೃತ್ ಪೌಲ್ ಬಂಧನ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದರು.