ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿ ಸಂತ್ರಸ್ತೆ ನನ್ನನ್ನು ಭೇಟಿಯಾದರೆ ಸಹಾಯ ಮಾಡಲು ಸಿದ್ಧ: ಡಿ.ಕೆ.ಶಿವಕುಮಾರ್

Last Updated 27 ಮಾರ್ಚ್ 2021, 6:54 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿ.ಡಿ ಪ್ರಕರಣದಲ್ಲಿನ ಸಂತ್ರಸ್ತ ಯುವತಿ ಇದುವರೆಗೆ ನನ್ನನ್ನು ಭೇಟಿಯಾಗಿಲ್ಲ. ಈಗಲೂ ನನ್ನನ್ನು ಭೇಟಿಯಾದರೆ ಆಕೆಗೆ ಸಹಾಯ ಮಾಡಲು ಸಿದ್ಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ‌ ಮಾತನಾಡಿದ ಅವರು, ‘ಪ್ರತಿದಿನ ಮನೆ, ಕಚೇರಿಗೆ ಸಾವಿರಾರು ಜನ ನನ್ನನ್ನು ಭೇಟಿಯಾಗಲು ಬರುತ್ತಾರೆ. ಆ ಯುವತಿ ಕೂಡಾ ಭೇಟಿ ಮಾಡಲು ಯತ್ನಿಸಿರಬಹುದು’ ಎಂದರು.

‘ನರೇಶ್ ನನ್ನ ಆಪ್ತ. ಮಾಧ್ಯಮದಲ್ಲಿ ಇದ್ದವನು. ನನಗೆ ಬಹಳ ಪರಿಚಯ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ನನ್ನನ್ನು ಸಂಪರ್ಕಿಸಿಲ್ಲ. ಸಹಾಯ ಕೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT