ಕೇಂದ್ರ ಸರ್ಕಾರವು ಹಣ ನೀಡುವ ಬದಲಾಗಿ, ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅರ್ಜಿ ಸಲ್ಲಿಸಿ, ಆರೋಗ್ಯವು ರಾಜ್ಯ ಸರ್ಕಾರಗಳ ಆದ್ಯತೆಯ ವಿಷಯ ಎಂದು ಪ್ರತಿಪಾದಿಸಿತ್ತು.ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ನಂತಹ (ಎಲ್ಎಸ್ಡಿ) ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಾವು ಬದುಕಿನ ವಿಚಾರವಿದು ಎಂದು ಹೇಳಿದ್ದ ಹೈಕೋರ್ಟ್, ಜುಲೈ ಮೂರನೇ ವಾರದೊಳಗೆ ಹಣ ಬಿಡುಗಡೆ ಮಾಡದಿದ್ದರೆ, ಈ ಮಕ್ಕಳ ಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿತ್ತು.