ಹೊಸದುರ್ಗ: ರಾಜ್ಯ ಖನಿಜ ನಿಗಮವು 2019–20ನೇ ಸಾಲಿನಲ್ಲಿ ₹ 357 ಕೋಟಿ ವಹಿವಾಟು ನಡೆಸಿದ್ದು, ₹ 196 ಕೋಟಿ ಲಾಭ ಗಳಿಸಿದೆ ಎಂದು ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ತಿಳಿಸಿದ್ದಾರೆ.
‘ಕಂಪನಿಯ ಷೇರುದಾರರಿಗೆ ಶೇ 50ರಷ್ಟು ಲಾಭಾಂಶವನ್ನು ಹಂಚಿಕೆ ಮಾಡಲು ಈಚೆಗೆ ನಡೆದ54ನೇ ವಾರ್ಷಿಕ ಸಭೆಯಲ್ಲಿ ಅನುಮೋದಿಸಿದೆ. ಷೇರುಗಳ ಅನ್ವಯ ಸರ್ಕಾರಕ್ಕೆ ನೀಡಬೇಕಾದ ₹ 29.75 ಕೋಟಿ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲಾಯಿತು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಪರಿಹಾರ ನಿಧಿಗೂ ನಿಗಮದಿಂದ ₹ 15 ಕೋಟಿ ದೇಣಿಗೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.