ಟಿ.ಎಸ್.ಆರ್. ಸುಬ್ರಮಣಿಯನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಸಾರವಾಗಿ ಭಾರತೀಯ ಆಡಳಿತ ಸೇವೆ (ಕೇಡರ್) ತಿದ್ದುಪಡಿ ನಿಯಮಗಳನ್ನು ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದಿದೆ. ಮುಖ್ಯವಾಗಿ ಐಎಎಸ್ ಅಧಿಕಾರಿಗಳ ಕನಿಷ್ಠ ಅಧಿಕಾರಾವಧಿಯನ್ನು ಈ ನಿಯಮಾವಳಿ ಒಳಗೊಂಡಿದೆ. ಈ ನಿಯಮಾವಳಿ ಅಡಿಯಲ್ಲಿ 2014ರ ಜನವರಿ 31ರಲ್ಲಿ ರಾಜ್ಯ ಸರ್ಕಾರವು ಸಿಎಸ್ಬಿ ರಚಿಸಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಮಂಡಳಿಗೆ ಅಧ್ಯಕ್ಷರಾಗಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸದಸ್ಯರಾಗಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್) ಕಾರ್ಯದರ್ಶಿ ಅವರು ಸಂಯೋಜಕರಾಗಿದ್ದರು. ಆದರೆ, 2014ರ ಮಾರ್ಚ್ 12ರಂದು ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು.