2019ರ ಅಕ್ಟೋಬರ್ನಲ್ಲಿ ದಮ್ಮೂರು ಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ ಕೂಡಲೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದಿಯಾಗಿ 40 ಮಂದಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ಶೇಖರ್ ಅವರ ನೇಮಕಾತಿಯನ್ನು ಆದೇಶ ಹೊರಡಿಸಿದ ದಿನವೇ ರದ್ದುಪಡಿಸಲಾಗಿತ್ತು. ಎರಡನೇ ಬಾರಿ ಶೇಖರ್ ಅವರನ್ನು ನೇಮಿಸಲಾಗಿತ್ತು. ಅವರು ಮುಂದುವರಿಯುತ್ತಿರುವಾಗಲೇ ಸರ್ಕಾರ ರಾಮಲಿಂಗಪ್ಪ ಅವರನ್ನು ನೇಮಿಸಿ, ಆದೇಶವನ್ನು ರದ್ದುಪಡಿಸಿದೆ.