‘ನಾನು ಮನೆಯಲ್ಲಿ ತಂದೆಯವರ ಆಡಳಿತ ವೈಖರಿ ನೋಡಿಕೊಂಡು ಬೆಳೆದವನು. ಅವರ ಪ್ರಾಮಾಣಿಕತೆ, ಬದ್ಧತೆ ನನಗೆ ಸ್ಫೂರ್ತಿಯಾಗಿದೆ. ತತ್ವ, ಸಿದ್ದಾಂತದ ವಿಚಾರದಲ್ಲಿ ಅವರು ಎಂದೂ ರಾಜಿಯಾದವರಲ್ಲ. ವರುಣಾ ಕ್ಷೇತ್ರದ ಶಾಸಕನಾಗಿರುವ ಕಾರಣಕ್ಕೆ ವೃತ್ತಿಯಲ್ಲಿ ವೈದ್ಯನಾದರೂ ಸದ್ಯ ರಾಜಕೀಯಕ್ಕೆ ಆದ್ಯತೆ ನೀಡುತ್ತೇನೆ. ಈಗ ರಾಜಕೀಯ ಮಾಡುವುದು ಅಷ್ಟು ಸುಲಭವಲ್ಲ’ ಎಂದರು.