ಆಟೊ, ಟ್ಯಾಕ್ಸಿ ಚಾಲಕರಿಗೂ ತಿಂಗಳಿಗೆ ₹ 10,000 ಪರಿಹಾರ ನೀಡಬೇಕು. ಶೈಕ್ಷಣಿಕ ಶುಲ್ಕವನ್ನು ಶೇಕಡ 50ರಷ್ಟು ಕಡಿತಗೊಳಿಸಲು ಆದೇಶ ಹೊರಡಿಸಬೇಕು. ಎಲ್ಲ ರೈತರಿಗೂ ಸಹಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಬ್ಯಾಂಕ್ಗಳ ಮೂಲಕ ₹ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಔಷಧಿಗಳ ದಾಸ್ತಾನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ರಸಗೊಬ್ಬರದ ದರ ಏರಿಕೆಯನ್ನು ತಡೆ ಹಿಡಿದಿರುವ ಆದೇಶವನ್ನು ಮುಂದುವರಿಸಿ, ಹಳೆಯ ದರದಲ್ಲೇ ಮಾರಾಟ ಮಾಡಲು ಆದೇಶಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.