ಶಿರಾದಲ್ಲಿ ಜೆಡಿಎಸ್ ಭದ್ರ ನೆಲೆ ಹೊಂದಿತ್ತು. ಆದರೆ ಉಪಚುನಾವಣೆ ಮೇಲ್ನೋಟಕ್ಕೆ ಆ ಪಕ್ಷದ ನೆಲೆಯನ್ನು ಸಡಿಲಿಸಿದೆ.ಜೆಡಿಎಸ್ನ ನೇತೃತ್ವವಹಿಸಿಕೊಳ್ಳಬೇಕಾಗಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಮಾಜಿ ಶಾಸಕ ಸುರೇಶ್ ಬಾಬು ಸಕ್ರಿಯವಾಗಲಿಲ್ಲ. ಈ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎನ್ನುತ್ತವೆ ಆ ಪಕ್ಷದ ಮೂಲಗಳು. ಶಿರಾ ಫಲಿತಾಂಶ ಜೆಡಿಎಸ್ನಿಂದ ಹೊರಹೋಗುವವರ ಸಂಖ್ಯೆಯನ್ನು ಹೆಚ್ಚಿಸಲೂಬಹುದು.