<p><strong>ದಾವಣಗೆರೆ</strong>: ರಾಜ್ಯದಾದ್ಯಂತ ಜಾನುವಾರುಗಳಲ್ಲಿಚರ್ಮಗಂಟು ರೋಗದ (ಲಂಪಿ ಸ್ಕಿನ್ ಡಿಸೀಸ್) ಕಾಣಿಸಿಕೊಂಡಿದ್ದು, ಲಸಿಕೆ ಕಂಡು ಹಿಡಿದಿದ್ದರೂ ಪಶು ಆಸ್ಪತ್ರೆಗಳಿಗೆ ಬರಲು ಇನ್ನೂ 6ರಿಂದ 7 ತಿಂಗಳು ಬೇಕಾಗಲಿದೆ. ಇದರಿಂದ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆಗೆ ಒಳಗಾಗುವ ಆತಂಕ ಎದುರಾಗಿದೆ.</p>.<p>ಎರಡು ತಿಂಗಳಿಂದದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ. ರಾಜ್ಯದ ಬೆಂಗಳೂರು ಗ್ರಾಮಾಂತರ, ಹಾವೇರಿ, ದಾವಣಗೆರೆ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೋಗ ಉಲ್ಬಣಿಸಿದೆ. ರಾಜ್ಯದಲ್ಲಿ 3800ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಇದು ಕಾಣಿಸಿಕೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ 90ಕ್ಕೂ ಹೆಚ್ಚು ಜಾನುವಾರು ರೋಗಬಾಧೆಗೆ ಒಳಗಾಗಿವೆ.</p>.<p>ಒಂದು ಹಸುವಿನಲ್ಲಿ ರೋಗ ಕಾಣಿಸಿಕೊಂಡ ಕೂಡಲೇ ಇತರ ಜಾನುವಾರಿಗೂ ತಕ್ಷಣ ಹರಡುತ್ತದೆ. ಕೆಲ ರೈತರು ಇದನ್ನು ಬೇಗ ಗುರುತಿಸುತ್ತಾರೆ. ಕೆಲವರು ಗುರುತಿಸದ ಕಾರಣ ಹೆಚ್ಚಿನ ಜಾನುವಾರು ರೋಗಕ್ಕೆ ತುತ್ತಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು.</p>.<p>ಈ ರೋಗಕ್ಕೆಸದ್ಯ ನಿರ್ದಿಷ್ಟ ಲಸಿಕೆ ಇಲ್ಲ.ಕಳೆದ ತಿಂಗಳು ಚರ್ಮಗಂಟು ರೋಗಕ್ಕೆ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ)ನಿಂದ ಲಂಪಿ ಸ್ಕಿನ್ ಡಿಸೀಸ್ ನಿರೋಧಕ ಲಸಿಕೆ ಕಂಡುಹಿಡಿಯಲಾಗಿದೆ. ಆದರೆ, ಅದು ರಾಜ್ಯಕ್ಕೆ ಬರಲು ಇನ್ನೂ 6ರಿಂದ 7 ತಿಂಗಳ ಸಮಯ ಹಿಡಿಯಬಹುದು. ಕಂಪನಿಗೆ ಗುತ್ತಿಗೆ ನೀಡಿ ಅವರು ಲಸಿಕೆ ತಯಾರಿಕೆ ಆರಂಭಿಸಲು ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ರಾಜ್ಯದಾದ್ಯಂತ ಜಾನುವಾರುಗಳಲ್ಲಿಚರ್ಮಗಂಟು ರೋಗದ (ಲಂಪಿ ಸ್ಕಿನ್ ಡಿಸೀಸ್) ಕಾಣಿಸಿಕೊಂಡಿದ್ದು, ಲಸಿಕೆ ಕಂಡು ಹಿಡಿದಿದ್ದರೂ ಪಶು ಆಸ್ಪತ್ರೆಗಳಿಗೆ ಬರಲು ಇನ್ನೂ 6ರಿಂದ 7 ತಿಂಗಳು ಬೇಕಾಗಲಿದೆ. ಇದರಿಂದ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆಗೆ ಒಳಗಾಗುವ ಆತಂಕ ಎದುರಾಗಿದೆ.</p>.<p>ಎರಡು ತಿಂಗಳಿಂದದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ. ರಾಜ್ಯದ ಬೆಂಗಳೂರು ಗ್ರಾಮಾಂತರ, ಹಾವೇರಿ, ದಾವಣಗೆರೆ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೋಗ ಉಲ್ಬಣಿಸಿದೆ. ರಾಜ್ಯದಲ್ಲಿ 3800ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಇದು ಕಾಣಿಸಿಕೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ 90ಕ್ಕೂ ಹೆಚ್ಚು ಜಾನುವಾರು ರೋಗಬಾಧೆಗೆ ಒಳಗಾಗಿವೆ.</p>.<p>ಒಂದು ಹಸುವಿನಲ್ಲಿ ರೋಗ ಕಾಣಿಸಿಕೊಂಡ ಕೂಡಲೇ ಇತರ ಜಾನುವಾರಿಗೂ ತಕ್ಷಣ ಹರಡುತ್ತದೆ. ಕೆಲ ರೈತರು ಇದನ್ನು ಬೇಗ ಗುರುತಿಸುತ್ತಾರೆ. ಕೆಲವರು ಗುರುತಿಸದ ಕಾರಣ ಹೆಚ್ಚಿನ ಜಾನುವಾರು ರೋಗಕ್ಕೆ ತುತ್ತಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು.</p>.<p>ಈ ರೋಗಕ್ಕೆಸದ್ಯ ನಿರ್ದಿಷ್ಟ ಲಸಿಕೆ ಇಲ್ಲ.ಕಳೆದ ತಿಂಗಳು ಚರ್ಮಗಂಟು ರೋಗಕ್ಕೆ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ)ನಿಂದ ಲಂಪಿ ಸ್ಕಿನ್ ಡಿಸೀಸ್ ನಿರೋಧಕ ಲಸಿಕೆ ಕಂಡುಹಿಡಿಯಲಾಗಿದೆ. ಆದರೆ, ಅದು ರಾಜ್ಯಕ್ಕೆ ಬರಲು ಇನ್ನೂ 6ರಿಂದ 7 ತಿಂಗಳ ಸಮಯ ಹಿಡಿಯಬಹುದು. ಕಂಪನಿಗೆ ಗುತ್ತಿಗೆ ನೀಡಿ ಅವರು ಲಸಿಕೆ ತಯಾರಿಕೆ ಆರಂಭಿಸಲು ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>