ಬೆಂಗಳೂರು: ಸೆಪ್ಟಂಬರ್ 21 ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನ ನಡೆಸುವ ಸಂಬಂಧ ವಿಧಾನಸಭೆ ಸಭಾಂಗಣದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಸುರಕ್ಷಿತ ವ್ಯವಸ್ಥೆ ಮಾಡುವ ಸಂಬಂಧ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲನೆ ನಡೆಸಿದರು.
ಪ್ರತಿಯೊಬ್ಬ ಸದಸ್ಯನ ಆಸನದ ಸುತ್ತ ಚೌಕಕಾರದ ಗಾಜಿನ ತಡೆಯನ್ನು ಇರಿಸಿ, ಅದರಿಂದ ಸದಸ್ಯರಿಗೆ ಮಾತನಾಡಲು ಎದುರಾಗುವ ಅಡ್ಡಿಗಳ ಬಗ್ಗೆ ಅಧಿಕಾರಿಗಳ ಜತೆ ಕಾಗೇರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮಾತುಕತೆ ನಡೆಸಿದರು.
ಕೋವಿಡ್ ಕಾರಣ ಯಾವುದೇ ಸದಸ್ಯರಿಗೂ ಸೋಂಕು ತಗುಲಬಾರದು ಎಂಬ ಕಾರಣಕ್ಕೆ ವಿಶೇಷ ಮುತುರ್ವಜಿ ವಹಿಸಲಾಗಿದೆ. ಹಲವು ಶಾಸಕರು ಮತ್ತು ಸಚಿವರು ಕೋರೊನಾ ಸೋಂಕಿಗೆ ಒಳಗಾಗಿದ್ದ ಕಾರಣ ಎಚ್ಚರಿಕೆ ವಹಿಸಲಾಗಿದೆ.