ಮೈಸೂರು: ‘ರಾಜ್ಯ ರಾಜಕಾರಣಕ್ಕೆ ಬರುವ ಯೋಚನೆ ಸದ್ಯಕ್ಕಿಲ್ಲ’ ಎಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.
ಯಾವುದಾದರೂ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುವ ಇರಾದೆ ಇದೆಯೇ ಎಂಬುದಕ್ಕೆ, ‘ಲೋಕಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ. ಆಗ ನೋಡೋಣ’ ಎಂದುತ್ತರಿಸಿದರು.
ಪುತ್ರ ಅಭಿಷೇಕ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ‘ಅಭಿಷೇಕ್ ಬಳಿಯೇ ಈ ಪ್ರಶ್ನೆ ಕೇಳಿ. ರಾಜಕಾರಣಿಯಾಗು, ನಟನಾಗು ಎಂದು ನಾನು ಯಾವತ್ತೂ ಆತನಲ್ಲಿ ಕೇಳಿಲ್ಲ. ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದೇನೆ’ ಎಂದರು.