ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಸುರ್ಜೇವಾಲಾ ಕಾಂಗ್ರೆಸ್ ಜಗಳ ಬಗೆಹರಿಸಲಿ: ಬೊಮ್ಮಾಯಿ

Last Updated 19 ಫೆಬ್ರುವರಿ 2023, 5:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ಅವರು ಮೊದಲು ಕಾಂಗ್ರೆಸ್ ನಾಯಕರ ಜಗಳ ಬಗೆಹರಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭ್ರಷ್ಟ ಬಿಜೆಪಿಗೆ ಪ್ರತ್ಯೇಕ ನರಕವನ್ನೇ ಸೃಷ್ಟಿಸಬೇಕು ಎಂಬ ಸುರ್ಜೇವಾಲಾ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದರು. ಯಾರು ಅಸುರರು ಎಂಬ ಮಾಹಿತಿ ಜನರಿಗೆ ಇದೆ. ಕಾಂಗ್ರೆಸ್‌ ಅಸುರರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ ಸಾಧನೆ ಬಿಜೆಪಿ ವೈಫಲ್ಯ ತೋರಿಸುವ ಬದಲು ಈ ರೀತಿ ಮಾತನಾಡಿದರೆ ಯಾವುದೇ ಪರಿಣಾಮ ಬೀರದು ಎಂದರು.

ಕಾಂಗ್ರೆಸ್ ಯೋಜನೆಗಳನ್ನು ನಾವು ನಕಲು ಮಾಡುತ್ತಿಲ್ಲ ನಮ್ಮ ಯೋಜನೆಗಳನ್ನೇ ಅವರು ನಕಲು ಮಾಡುತ್ತಿದ್ದಾರೆ. ನಾನು ಗೃಹಿಣಿ ಶಕ್ತಿ ಯೋಜನೆ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದೆ, ಅದನ್ನೇ ಇಟ್ಟುಕೊಂಡು ಅವರು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಕಿವಿಯ ಮೇಲೆ ಜನ ಶಾಶ್ವತವಾಗಿ ಹೂ ಇಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಕಳೆದ ವರ್ಷವೂ ಸಮಿತಿ ನೇಮಕ ಮಾಡಿದ್ದರಿಂದ ಶೇ90 ರಷ್ಟು ಘೋಷಣೆಗಳ ಅನುಷ್ಠಾನಕ್ಕೆ ಆದೇಶವಾಗಿದೆ ಎಂದು ತಿಳಿಸಿದರು. ಮಹದಾಯಿ ಯೋಜನೆ ಕಾಮಗಾರಿ ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT