ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಈ ಎರಡು ವರ್ಷದಲ್ಲಿ ಬರೀ ಅಧಿಕಾರ ಕೇಂದ್ರಿತ ಕಿತ್ತಾಟದಲ್ಲಿಯೇ ಕಳೆದಿದೆ. ಮುಂದೆಯೂ ಪ್ರತಿ ದಿನವೂ ಇದು ಮುಂದುವರೆಯಲಿದೆ. ಜನಪರವಾಗಿ ಒಂದು ದಿನವೂ ಕೆಲಸ ಮಾಡದ ಬಿಜೆಪಿ ಸರ್ಕಾರ, ದುರಾಡಳಿತವನ್ನು ಪ್ರಶ್ನಿಸುವ ವಿಪಕ್ಷ ನಾಯಕರನ್ನು ನಿಂದಿಸುವ ಬದಲು ಉಳಿದ ಸ್ವಲ್ಪ ಸಮಯದಲ್ಲಿಯಾದರೂ ಜನರಿಗಾಗಿ ಕೆಲಸ ಮಾಡಲಿ’ ಎಂದು ವ್ಯಂಗ್ಯವಾಡಿದೆ.