ಅ.28ರಂದು ಸರ್ಕಾರ ಹಮ್ಮಿ ಕೊಂಡಿರುವ ಕನ್ನಡ ಗೀತೆ ಗಾಯನದಲ್ಲಿ ಅಧಿಕೃತವಾಗಿಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’, ಡಾ.ರಾಜ್ ಹಾಡಿರುವ ‘ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟ ಬೇಕು’ ಹಾಡಬೇಕು. ಈ ಕಾರ್ಯಕ್ರಮ ಕ್ಕಾಗಿ ಒಂದು ವೇಳೆ ನಾಡಗೀತೆ ಹಾಡುವ ಹಾಗಿದ್ದರೆ, ಯಾವುದೇ ಧಾಟಿಯಲ್ಲೂ ಹಾಡಬಹುದು. ನಿರ್ದಿಷ್ಟ ಧಾಟಿಯಲ್ಲಿ ಹಾಡಬೇಕು ಎಂದು ಒತ್ತಡ ಹೇರು ವಂತಿಲ್ಲ. ಆದರೆ, ನಾಡಗೀತೆ ಬಗ್ಗೆ ಮುಖ್ಯಮಂತ್ರಿ ಅವರು ಅಂತಿಮ ತೀರ್ಮಾನ ತೆಗೆದುಕೊಂಡ ಮೇಲೆ ಅದೇ ಧಾಟಿಯಲ್ಲಿ ಹಾಡಬೇಕಾಗುತ್ತದೆ ಎಂದು ಸುನಿಲ್ ಕುಮಾರ್ ಹೇಳಿದರು.