‘ಸುತ್ತಮುತ್ತಲಿನ ಮೂರು ಹಳ್ಳಿಯವರಿಗೆ ಒಂದೇ ಸೊಸೈಟಿಯಲ್ಲಿ ಅಕ್ಕಿ ಕೊಡೋದು. ಮೂರು ಹಳ್ಳಿಯ ಜನಕ್ಕೂ ಹೀಗೇ ಬೆದರಿಸಿ, ಲಸಿಕೆ ಹಾಕಿಸಿದ್ದರು. ಸೊಸೈಟಿ ಮಾತ್ರವಲ್ಲ, ಹಾಲಿನ ದುಡ್ಡು ಬಟವಾಡೆ ಮಾಡುವುದನ್ನು ತಡೆಹಿಡಿದಿದ್ದರು. ಲಸಿಕೆ ಹಾಕಿಸಿಕೊಂಡಿದ್ದವರಿಗೆ ಮಾತ್ರ ಹಾಲಿನ ದುಡ್ಡು ಬಟವಾಡೆ ಮಾಡಿದ್ದರು. ಹೀಗಾಗಿ ನಮ್ಮ ಕಾಲೊನಿಯ ಎಲ್ಲಾ ಹಿರಿಯರೂ ಲಸಿಕೆ ಹಾಕಿಸಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.