‘ಅಭಿಯಾನದ ಭಾಗವಾಗಿ ಅ.10ರಂದು #ಕನ್ನಡದಲ್ಲಿUPSC, #UPSCInKannada ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ಟ್ವಿಟರ್ನಲ್ಲಿ ದನಿ ಎತ್ತಲಿದ್ದೇವೆ. ಅಭಿಯಾನದಲ್ಲಿ ರಾಜ್ಯದ ಜನ ಭಾಗವಹಿಸಬಹುದು. ಕೇಂದ್ರ ಸರ್ಕಾರದ ಎಲ್ಲ ಹಂತದ ಪರೀಕ್ಷೆಗಳೂ ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ವಿಚಾರ ಸಂಕಿರಣ, ಚಿತ್ರ ಚಳವಳಿ, ಪತ್ರ ಚಳವಳಿಗಳನ್ನೂ ಹಮ್ಮಿಕೊಳ್ಳಲಿದ್ದೇವೆ’ ಎಂದರು.