ನಗರದಲ್ಲಿ ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘1994ರಲ್ಲಿ ದೇ.ಜವರೇಗೌಡ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ‘ಸುವರ್ಣ ಮಂಡ್ಯ’ ಕೃತಿಯಲ್ಲಿ ಈ ಪಾತ್ರಗಳು ಇವೆ. 2006ರಲ್ಲಿ ಪುಸ್ತಕ ಮರುಮುದ್ರಣವಾಗಿದ್ದು, ಎಚ್.ಡಿ.ದೇವೇಗೌಡ ಅವರು ಬಿಡುಗಡೆಗೊಳಿಸಿದ್ದಾರೆ. ಈ ಪಾತ್ರಗಳು ಬಿಜೆಪಿಯ ಕಟ್ಟುಕತೆ, ಸಿ.ಟಿ.ರವಿ ಸೃಷ್ಟಿ ಎಂದು ಪ್ರತಿಪಕ್ಷಗಳು ವೃಥಾ ಆರೋಪಿಸುತ್ತಿವೆ’ ಎಂದು ಉತ್ತರಿಸಿದರು.