<p>ವಚನ ಸಾಹಿತ್ಯವು ಅತ್ಯಮೂಲ್ಯವಾದ ವಿಶ್ವ ಸಂದೇಶವನ್ನು ನೀಡುತ್ತದೆ. ದೇಶ, ಕಾಲಾತೀತವಾಗಿ. ವರ್ಣ, ಜಾತಿ, ವರ್ಗರಹಿತವಾಗಿ ಎಲ್ಲ ಮಾನವರಿಗೆ ಅನ್ವಯವಾಗುವ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.</p>.<p>‘ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ! ತೊಟ್ಟಿಲು ಮುರಿದು, ನೇಣು ಹರಿದು, ಜೋಗಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು...’</p>.<p>ಸಾಮಾನ್ಯವಾಗಿ ಅನೇಕ ಧರ್ಮಶಾಸ್ತ್ರಗಳು ಮನುಷ್ಯನನ್ನು ವಿಚಾರ ದಾಸ್ಯಕ್ಕೆ, ಮತಾಂಧತೆಗೆ ತಳ್ಳುತ್ತದೆ. ತಮ್ಮ ಧರ್ಮಶಾಸ್ತ್ರವು ದೇವರಿಂದಲೇ ನೇರವಾಗಿ ಹೇಳಲ್ಪಟ್ಟುದು. ಆದ್ದರಿಂದ ಅದೇ ಮಾನನೀಯ ಎಂದು ಮತಾಂಧರಾಗಿ ಬಹಳ ಜನ ವರ್ತಿಸುತ್ತಾರೆ. ಇದನ್ನು ಅಲ್ಲಮಪ್ರಭುಗಳು ಬಹು ಮಾರ್ಮಿಕವಾಗಿ ವಿವರಿಸುತ್ತಾರೆ.</p>.<p>ಅಜ್ಞಾನ ಎಂಬ ತೊಟ್ಟಿಲಲ್ಲಿ ಜ್ಞಾನ ಎಂಬ ಶಿಶುವನ್ನು ಮಲಗಿಸಿ. ವೇದ, ಶಾಸ್ತ್ರ, ಪುರಾಣ, ಆಗಮ ಎಂಬ ಹಗ್ಗವನ್ನು ಅಜ್ಞಾನದ ತೊಟ್ಟಿಲಿಗೆ ಕಟ್ಟಿ ಭ್ರಾಂತಿ ‘ಇವೇ ಸತ್ಯ’ ಎಂಬ ಜೋಗಳ ಹಾಡುತ್ತ ಮಾನವನನ್ನು ಮೌಢ್ಯತೆಯ ನಿದ್ರೆಗೆ ಕೆಡುಹುತ್ತದೆ.</p>.<p>ಸತ್ಯ ಸ್ವರೂಪವಾದ ದೇವನ ಜ್ಞಾನ ಉಂಟಾಗಬೇಕಾದರೆ ಅಜ್ಞಾನದ ತೊಟ್ಟಿಲು ಮುರಿಯಬೇಕು. ಶಾಸ್ತ್ರ ದಾಸ್ಯದ ಹಗ್ಗ ಹರಿಯಬೇಕು. ಭ್ರಾಂತಿಯ ಭಾವನೆಯ ಜೋಗಳ ನಿಲ್ಲಬೇಕು. ಆಗ ಮಾತ್ರ ಜ್ಞಾನ ಶಿಶು ಎಚ್ಚೆತ್ತು ಸ್ವತಂತ್ರ ವಿಚಾರ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.</p>.<p>-ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಚನ ಸಾಹಿತ್ಯವು ಅತ್ಯಮೂಲ್ಯವಾದ ವಿಶ್ವ ಸಂದೇಶವನ್ನು ನೀಡುತ್ತದೆ. ದೇಶ, ಕಾಲಾತೀತವಾಗಿ. ವರ್ಣ, ಜಾತಿ, ವರ್ಗರಹಿತವಾಗಿ ಎಲ್ಲ ಮಾನವರಿಗೆ ಅನ್ವಯವಾಗುವ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.</p>.<p>‘ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ! ತೊಟ್ಟಿಲು ಮುರಿದು, ನೇಣು ಹರಿದು, ಜೋಗಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು...’</p>.<p>ಸಾಮಾನ್ಯವಾಗಿ ಅನೇಕ ಧರ್ಮಶಾಸ್ತ್ರಗಳು ಮನುಷ್ಯನನ್ನು ವಿಚಾರ ದಾಸ್ಯಕ್ಕೆ, ಮತಾಂಧತೆಗೆ ತಳ್ಳುತ್ತದೆ. ತಮ್ಮ ಧರ್ಮಶಾಸ್ತ್ರವು ದೇವರಿಂದಲೇ ನೇರವಾಗಿ ಹೇಳಲ್ಪಟ್ಟುದು. ಆದ್ದರಿಂದ ಅದೇ ಮಾನನೀಯ ಎಂದು ಮತಾಂಧರಾಗಿ ಬಹಳ ಜನ ವರ್ತಿಸುತ್ತಾರೆ. ಇದನ್ನು ಅಲ್ಲಮಪ್ರಭುಗಳು ಬಹು ಮಾರ್ಮಿಕವಾಗಿ ವಿವರಿಸುತ್ತಾರೆ.</p>.<p>ಅಜ್ಞಾನ ಎಂಬ ತೊಟ್ಟಿಲಲ್ಲಿ ಜ್ಞಾನ ಎಂಬ ಶಿಶುವನ್ನು ಮಲಗಿಸಿ. ವೇದ, ಶಾಸ್ತ್ರ, ಪುರಾಣ, ಆಗಮ ಎಂಬ ಹಗ್ಗವನ್ನು ಅಜ್ಞಾನದ ತೊಟ್ಟಿಲಿಗೆ ಕಟ್ಟಿ ಭ್ರಾಂತಿ ‘ಇವೇ ಸತ್ಯ’ ಎಂಬ ಜೋಗಳ ಹಾಡುತ್ತ ಮಾನವನನ್ನು ಮೌಢ್ಯತೆಯ ನಿದ್ರೆಗೆ ಕೆಡುಹುತ್ತದೆ.</p>.<p>ಸತ್ಯ ಸ್ವರೂಪವಾದ ದೇವನ ಜ್ಞಾನ ಉಂಟಾಗಬೇಕಾದರೆ ಅಜ್ಞಾನದ ತೊಟ್ಟಿಲು ಮುರಿಯಬೇಕು. ಶಾಸ್ತ್ರ ದಾಸ್ಯದ ಹಗ್ಗ ಹರಿಯಬೇಕು. ಭ್ರಾಂತಿಯ ಭಾವನೆಯ ಜೋಗಳ ನಿಲ್ಲಬೇಕು. ಆಗ ಮಾತ್ರ ಜ್ಞಾನ ಶಿಶು ಎಚ್ಚೆತ್ತು ಸ್ವತಂತ್ರ ವಿಚಾರ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.</p>.<p>-ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>