‘ರಾಜ್ಯದಲ್ಲಿರುವ 19 ತಳಿ ಸಂವರ್ಧನಾ ಕೇಂದ್ರಗಳಲ್ಲಿರುವ 927ಕ್ಕೂ ಹೆಚ್ಚು ಹೆಣ್ಣು ಕರುಗಳನ್ನು ಅಮೃತ ಸಿರಿ ಯೋಜನೆಯಡಿ ವಿತರಿಸಲಾಗುವುದು. ಹಳ್ಳಿಕಾರ್, ಅಮೃತ್ ಮಹಲ್, ಮಲೆನಾಡು ಗಿಡ್ಡ, ಖಿಲಾರಿ ಮತ್ತು ಕೃಷ್ಣವ್ಯಾಲಿ ತಳಿಯ ಈ ಕರುಗಳನ್ನು ದೇಶೀಯ ತಳಿಯ ಜಾನುವಾರುಗಳ ಅಭಿವೃದ್ಧಿ ಉದ್ದೇಶದಿಂದ ವಿತರಣೆ ಮಾಡಲು ನಿರ್ಧರಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.