ಜಾಮೀನು ಕೋರಿ ವಿನಯ ಕುಲಕರ್ಣಿ ಸಲ್ಲಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಸಿಬಿಐ, ‘ರಾಜಕೀಯ ಕಾರಣಗಳಿಗೆ ಈ ಹತ್ಯೆ ನಡೆದಿದೆ. ಪ್ರಕರಣದಲ್ಲಿ ವಿನಯ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ. ಜಿಮ್ನಿಂದ ಹೊರ ಬರುವಾಗ ಯೋಗೇಶ್ ಗೌಡ ಕೊಲೆಯಾಗಿದೆ. ಆರೋಪಿಗಳು ಶರಣಾಗಿದ್ದರು. ಪ್ರತ್ಯಕ್ಷ ಸಾಕ್ಷ್ಯಗಳನ್ನು ಅರ್ಜಿದಾರರು ಬೆದರಿಸಿ ದೂರ ಉಳಿಯುವಂತೆ ನೋಡಿಕೊಂಡಿದ್ದರು. ಇದಕ್ಕೆ ಸ್ಥಳೀಯ ಪೊಲೀಸರು ಮತ್ತು ವಿನಯ ಕುಲಕರ್ಣಿ ಸಂಬಂಧಿಸಿಕರು ನೆರವು ನೀಡಿದ್ದರು ಎಂಬ ಅಂಶಗಳು ತನಿಖೆ ವೇಳೆ ಪತ್ತೆಯಾಗಿವೆ’ ಎಂದು ತಿಳಿಸಿದೆ. ಸಿಬಿಐ ಪರ ವಿಶೇಷ ವಕೀಲ ಪಿ. ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.