'ಕಾಂಗ್ರೆಸ್ ಕಚೇರಿ, ಪಕ್ಷದ ದೇವಸ್ಥಾನ ಇದ್ದಂತೆ. ಎಲ್ಲ ಸ್ಥಳೀಯ ನಾಯಕರು ಕಾಂಗ್ರೆಸ್ ಕಚೇರಿ ಒಳಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿಯೇ ಸಭೆ ನಡೆಸಬೇಕು. ನಾಯಕರ ಮನೆಗಳಲ್ಲಿ ಸಭೆ ನಡೆಸಬಾರದು' ಎಂದರು.
'ವ್ಯಕ್ತಿ ಪೂಜೆ ಮಾಡುವುದು, ಜೈಕಾರ ಹಾಕುವುದು ಬೇಡ. ಪಕ್ಷ ಪೂಜೆ ಇರಲಿ. ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ, ಆ ವ್ಯಕ್ತಿ ಎಷ್ಟು ಜನರನ್ನು ಬೆಳೆಸುತ್ತಾನೆ ಎಂಬುದು ಮುಖ್ಯ' ಎಂದರು.