‘ನಾನು ನಾಗಪುರ ವಿಶ್ವವಿದ್ಯಾಲಯದನು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಕರೆದಿದ್ದಾರೆ. ಅಲ್ಲಿ ಕಲಿತಿದ್ದರಿಂದಲೇ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡಿದ್ದೇನೆ. ಆದ್ದರಿಂದಲೇ ಶಿವಮೊಗ್ಗದ ಜನರು ನನ್ನನ್ನು 5 ಬಾರಿ ಆಯ್ಕೆ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ದೀನದಯಾಳ್ ಉಪಾಧ್ಯಾಯ ಮತ್ತು ವೀರ್ಸಾವರ್ಕರ್ ಫೋಟೊಗಳಿಗೆ ಮಸಿ ಬಳಿಯುತ್ತೇವೆ ಎನ್ನುವ ಕಾಂಗ್ರೆಸ್ನವರ ಸಂಸ್ಕಾರ–ಸಂಸ್ಕೃತಿ ಏನು’ ಎಂದು ಪ್ರಶ್ನಿಸಿದರು.