ಸಚಿವ ಉಮೇಶ ಕತ್ತಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ಮೊಬೈಲ್, ಟಿವಿ ಜೀವನ ಅಗತ್ಯ ವಸ್ತುಗಳಾಗಿದ್ದು, ಇವು ಜೀವನಮಟ್ಟ ಅಳೆಯಲು ಮಾನದಂಡಗಳಲ್ಲ. ಇವು ಐಷರಾಮಿ ಎಂದು ಹೇಳುವುದನ್ನು ನಾನು ವಿರೋಧಿಸುತ್ತೇನೆ. ಒಬ್ಬ ಕಾರ್ಮಿಕ ಕೆಲಸ ಮಾಡುವುದಕ್ಕೆ ಸಲಿಕೆ, ಗುದ್ದಲಿ ಹೇಗೆ ಅಗತ್ಯ ಇದೆಯೋ ಹಾಗೆಯೇ ಇಂದಿನ ದಿನಗಳಲ್ಲಿ ಮೊಬೈಲ್ ಟಿವಿಗಳು ಜೀವನದ ಭಾಗವಾಗಿ ಕೆಲಸ ಮಾಡುವುದಕ್ಕೆ ಅಗತ್ಯವಾಗಿವೆ’ ಎಂದು ಹೇಳಿದರು.