ಚಾಮರಾಜನಗರದ ಕಡೆ ವಿಜಯೇಂದ್ರ ನಡೆ: ‘ಚಾಮರಾಜನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಮಹೇಶ್ ಮತ್ತು ವಿಜಯೇಂದ್ರ ಅವರ ಶಕ್ತಿ ಒಟ್ಟಾದರೆ ಮುಂದಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು. ‘ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ವಿಜಯೇಂದ್ರ ಯುವ ಶಕ್ತಿಯಾಗಿ ಹೊಮ್ಮಿದ್ದು, ಪಕ್ಷವನ್ನು ಕಟ್ಟುತ್ತಿದ್ದಾರೆ. ಈ ಎಲ್ಲ ಕಾರಣಗಳಿಗೆ ಬಿಜೆಪಿ ಸೇರಿದ್ದೇನೆಯೇ ಹೊರತು ಅಧಿಕಾರದ ಆಸೆಯಿಂದ ಅಲ್ಲ’ ಎಂದು ಎನ್.ಮಹೇಶ್ ಹೇಳಿದರು.