<p>ಕೋಲಾರ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಬೇಸಿಗೆಯ ತಾಪ ಏರುವ ಮುನ್ನವೇ ನೀರಿನ ಸಮಸ್ಯೆ ಭುಗಿಲೆದ್ದಿದೆ. ಹಲವು ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿಗಳೂ ವಿಫಲವಾಗುತ್ತಿವೆ. ಜಿಲ್ಲಾಡಳಿತ ಟ್ಯಾಂಕರ್ಗಳಲ್ಲಿ ನೀರು ಪೂರೈಸುತ್ತಿದೆ. ಖಾಸಗಿ ತೋಟಗಳ ಕೊಳವೆ ಬಾವಿಗಳಿಂದಲೂ ನೀರು ಪಡೆಯುತ್ತಿದೆ. <br /> <br /> ಇಂಥ ವೇಳೆಯಲ್ಲೇ, ಇದೇ ಜಿಲ್ಲೆಯ ಹಳ್ಳಿಯೊಂದರಲ್ಲಿ 24 ಗಂಟೆಯೂ ಜನರಿಗೆ ಮತ್ತು ರಾಸುಗಳಿಗೆ ನೀರು ಪೂರೈಕೆಯಾಗುತ್ತಿದೆ ಎಂಬುದೇ ವಿಶೇಷ. ಈ ಹಳ್ಳಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಹಳ್ಳಿಯ ನಡುವೆಯೇ ಇರುವ ಕುಂಟೆಯಲ್ಲಿ ಸದಾ ಕಾಲ ನೀರು ಸಂಗ್ರಹವಾಗಿರುತ್ತದೆ. ರಾಸುಗಳಿಗೆ ಯಾವಾಗ ಬೇಕಾದರೂ ಇಲ್ಲಿಂದ ನೀರು ಕೊಂಡೊಯ್ಯಬಹುದು. ಅಂದ ಹಾಗೆ ಯಾವುದೀ ಹಳ್ಳಿ? <br /> <br /> ಕೋಲಾರ- ಶ್ರೀನಿವಾಸಪುರ ರಸ್ತೆಯ ಪುಂಗನೂರು ಕ್ರಾಸ್ನಿಂದ 8 ಕಿಮೀ ದೂರದ ಬಂಡಪಲ್ಲಿಯೇ ಜಲ ಸುಭಿಕ್ಷೆಯಿಂದ ಸಂತೃಪ್ತವಾಗಿರುವ ಪುಟ್ಟ ಹಳ್ಳಿ. <br /> <br /> ಇಲ್ಲಿ 170 ಮನೆಗಳಿವೆ. ಜನಸಂಖ್ಯೆ ಸುಮಾರು 10 ಸಾವಿರ. ಕಳೆದ ಮೂರು ವರ್ಷದಿಂದ ಈ ಜನ ಯಾವತ್ತೂ ನೀರಿನ ಸಮಸ್ಯೆ ಬಗ್ಗೆ ದೂರಿಲ್ಲ. ಹಾಗಂತ ಇಲ್ಲಿನ ಯಾವುದೇ ಮನೆಗೂ ಪ್ರತ್ಯೇಕ ನಲ್ಲಿ ಸಂಪರ್ಕವೂ ಇಲ್ಲ. ಆದರೆ 32 ಬೀದಿ ನಲ್ಲಿಗಳಿಂದ ಜನ ನೀರು ಪಡೆಯುತ್ತಾರೆ. ನೀರಿನ ಮಿತ ಬಳಕೆ ಮತ್ತು ಆ ಮೂಲಕ ಜಲಸಂತೃಪ್ತಿಯ ದಾರಿ ಕಂಡುಕೊಂಡಿದ್ದಾರೆ. <br /> <br /> ಹಳ್ಳಿಯಲ್ಲಿನ ಎರಡು ಕೊಳವೆ ಬಾವಿಗಳಿಂದ ಬೃಹತ್ ಟ್ಯಾಂಕಿಗೆ ನೀರು ಹರಿಸಿ ಅಲ್ಲಿಂದ ಬೀದಿ ನಲ್ಲಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸುವ ವೇಳೆಯೂ ವಿಶಿಷ್ಟ ಮತ್ತು ಜನಸ್ನೇಹಿ. ಬೆಳಿಗ್ಗೆ 6 ರಿಂದ 7 ಮತ್ತು ಸಂಜೆ 7 ರಿಂದ 8ರ ವರೆಗೆ ಬೀದಿ ನಲ್ಲಿಗಳಲ್ಲಿ ನೀರು ಬರುತ್ತದೆ.<br /> <br /> ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ತಮ್ಮ ಕೆಲಸಕ್ಕೆ ಹೋಗುವ ಮುಂಚೆ, ಕೆಲಸಗಳನ್ನು ಮುಗಿಸಿ ಮನೆಗೆ ಬಂದ ಬಳಿಕ ನೀರು ಸಂಗ್ರಹಿಸಬಹುದು. ಈ ವೇಳಾಪಟ್ಟಿಯಿಂದ ಎಲ್ಲರೂ ನೀರು ಸಂಗ್ರಹಿಸಿಡಲು ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ, ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ.<br /> <br /> `ಮೂರು ವರ್ಷದ ಹಿಂದೆ ನಮ್ಮ ಹಳ್ಳಿಯಲ್ಲೂ ನೀರಿನ ಸಮಸ್ಯೆ ಇತ್ತು. ಮನೆಗಳಿಗೆ ನಲ್ಲಿ ಸಂಪರ್ಕ ಪಡೆದಿದ್ದ ಬಹಳಷ್ಟು ಮಂದಿ ನೀರನ್ನು ಮಿತವಾಗಿ ಬಳಸುತ್ತಿರಲಿಲ್ಲ. <br /> <br /> ಎಲ್ಲರಿಗೂ ಸಾಕಾಗುವಷ್ಟು ನೀರು ಸಿಗುತ್ತಿರಲಿಲ್ಲ. ಹೀಗಾಗಿಯೇ ಎಲ್ಲರ ಮನೆಗಳ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಿ ಬೀದಿ ನಲ್ಲಿ ಅಳವಡಿಸುವ ನಿರ್ಧಾರ ಮಾಡಿದೆವು. ಆ ಕೆಲಸವನ್ನೂ ಕೂಡ ಗ್ರಾಮಸ್ಥರೆಲ್ಲರೂ ಸೇರಿಕೊಂಡೇ ಮಾಡಿದ್ದು ಹೆಮ್ಮೆಯ ಸಂಗತಿ. <br /> <br /> ಮನೆ ನಲ್ಲಿ ಸಂಪರ್ಕ ಕಡಿದು ಹಾಕಲು ಪ್ರತಿ ಮನೆಯಿಂದಲೂ ಕನಿಷ್ಠ ಕೂಲಿಗೆ ಒಬ್ಬೊಬ್ಬರು, ಇಬ್ಬರು ಬಂದರು. ಕೆಲಸ ಸಲೀಸಾಯಿತು~ ಎಂದು ಅವರು ಸ್ಮರಿಸುತ್ತಾರೆ.<br /> <br /> <strong> 24 ಗಂಟೆ ನೀರು</strong><br /> ಹಳ್ಳಿಯ ನಡು ಮಧ್ಯೆ ಇರುವ ಓವರ್ಹೆಡ್ ಟ್ಯಾಂಕಿನ ಬುಡದಲ್ಲಿ ನಲ್ಲಿಯೊಂದನ್ನು ಹಾಕಲಾಗಿದೆ. ಆ ನಲ್ಲಿಯಲ್ಲಿ 24 ಗಂಟೆಯೂ ನೀರು ಬರುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೀದಿ ನಲ್ಲಿಯಲ್ಲಿ ಬರುವ ನೀರು ಸಾಲದಿದ್ದರೆ, ರಾಸುಗಳಿಗೆ ನೀರು ಬೇಕೆಂದಾಗ ಯಾರು ಬೇಕಾದರೂ ಈ ನಲ್ಲಿಯಿಂದ ನೀರು ಹಿಡಿಯಬಹುದು. ರಾಸುಗಳಿಗೂ ನೀರು ಕುಡಿಸಬಹುದು. ಇದು ಇಲ್ಲಿನ ವಿಶೇಷ. <br /> <br /> ಪಕ್ಕದ್ಲ್ಲಲೇ ಮತ್ತೊಂದು ವಿಶೇಷವೂ ಇದೆ. ಟ್ಯಾಂಕಿನ ಬುಡದ ಆ ಕಡೆಗೆ ಒಂದು ಕುಂಟೆಯಿದೆ. ಕೊಳವೆ ಬಾವಿಗಳಿಂದ ಟ್ಯಾಂಕಿಗೆ ಹರಿವ ನೀರು ತುಂಬಿದ ಬಳಿಕವೂ ವಿದ್ಯುತ್ ಪೂರೈಕೆ ಇದ್ದರೆ, ನೀರು ಕುಂಟೆಗೆ ಸೇರುವ ವ್ಯವಸ್ಥೆ ಮಾಡಲಾಗಿದೆ. 15 ಅಡಿ ಆಳದ ಕುಂಟೆಯಲ್ಲಿ ಗ್ರಾಮಸ್ಥರು ಮೀನು ಮರಿಗಳನ್ನೂ ಸಾಕುತ್ತಿದ್ದಾರೆ.<br /> <br /> ರಾಸುಗಳಿಗೆ ನೀರು ಬೇಕಾದವರು ಈ ಕುಂಟೆಯಿಂದಲೂ ನೀರು ಪಡೆಯಬಹುದು. ಆದರೆ ರಾಸುಗಳನ್ನು ಕುಂಟೆಗೆ ಇಳಿಸುವಂತಿಲ್ಲ. ಸ್ವಚ್ಛತೆಯನ್ನು ಕಾಪಾಡುವುದಕ್ಕೆಂದೇ ಈ ನಿಯಮವನ್ನು ಅಳವಡಿಸಲಾಗಿದೆ. <br /> <br /> `ನಮ್ಮ ಹಳ್ಳಿಯಲ್ಲಿರುವಂಥ ವ್ಯವಸ್ಥೆ ಸುತ್ತಮುತ್ತಲಿನ ಬೇರೆ ಹಳ್ಳಿಗಳಲ್ಲಿ ಇಲ್ಲವೇ ಇಲ್ಲ~ ಎಂಬುದು ಇಲ್ಲಿನ ಜನರ ಹೆಮ್ಮೆಯ ನುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಬೇಸಿಗೆಯ ತಾಪ ಏರುವ ಮುನ್ನವೇ ನೀರಿನ ಸಮಸ್ಯೆ ಭುಗಿಲೆದ್ದಿದೆ. ಹಲವು ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿಗಳೂ ವಿಫಲವಾಗುತ್ತಿವೆ. ಜಿಲ್ಲಾಡಳಿತ ಟ್ಯಾಂಕರ್ಗಳಲ್ಲಿ ನೀರು ಪೂರೈಸುತ್ತಿದೆ. ಖಾಸಗಿ ತೋಟಗಳ ಕೊಳವೆ ಬಾವಿಗಳಿಂದಲೂ ನೀರು ಪಡೆಯುತ್ತಿದೆ. <br /> <br /> ಇಂಥ ವೇಳೆಯಲ್ಲೇ, ಇದೇ ಜಿಲ್ಲೆಯ ಹಳ್ಳಿಯೊಂದರಲ್ಲಿ 24 ಗಂಟೆಯೂ ಜನರಿಗೆ ಮತ್ತು ರಾಸುಗಳಿಗೆ ನೀರು ಪೂರೈಕೆಯಾಗುತ್ತಿದೆ ಎಂಬುದೇ ವಿಶೇಷ. ಈ ಹಳ್ಳಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಹಳ್ಳಿಯ ನಡುವೆಯೇ ಇರುವ ಕುಂಟೆಯಲ್ಲಿ ಸದಾ ಕಾಲ ನೀರು ಸಂಗ್ರಹವಾಗಿರುತ್ತದೆ. ರಾಸುಗಳಿಗೆ ಯಾವಾಗ ಬೇಕಾದರೂ ಇಲ್ಲಿಂದ ನೀರು ಕೊಂಡೊಯ್ಯಬಹುದು. ಅಂದ ಹಾಗೆ ಯಾವುದೀ ಹಳ್ಳಿ? <br /> <br /> ಕೋಲಾರ- ಶ್ರೀನಿವಾಸಪುರ ರಸ್ತೆಯ ಪುಂಗನೂರು ಕ್ರಾಸ್ನಿಂದ 8 ಕಿಮೀ ದೂರದ ಬಂಡಪಲ್ಲಿಯೇ ಜಲ ಸುಭಿಕ್ಷೆಯಿಂದ ಸಂತೃಪ್ತವಾಗಿರುವ ಪುಟ್ಟ ಹಳ್ಳಿ. <br /> <br /> ಇಲ್ಲಿ 170 ಮನೆಗಳಿವೆ. ಜನಸಂಖ್ಯೆ ಸುಮಾರು 10 ಸಾವಿರ. ಕಳೆದ ಮೂರು ವರ್ಷದಿಂದ ಈ ಜನ ಯಾವತ್ತೂ ನೀರಿನ ಸಮಸ್ಯೆ ಬಗ್ಗೆ ದೂರಿಲ್ಲ. ಹಾಗಂತ ಇಲ್ಲಿನ ಯಾವುದೇ ಮನೆಗೂ ಪ್ರತ್ಯೇಕ ನಲ್ಲಿ ಸಂಪರ್ಕವೂ ಇಲ್ಲ. ಆದರೆ 32 ಬೀದಿ ನಲ್ಲಿಗಳಿಂದ ಜನ ನೀರು ಪಡೆಯುತ್ತಾರೆ. ನೀರಿನ ಮಿತ ಬಳಕೆ ಮತ್ತು ಆ ಮೂಲಕ ಜಲಸಂತೃಪ್ತಿಯ ದಾರಿ ಕಂಡುಕೊಂಡಿದ್ದಾರೆ. <br /> <br /> ಹಳ್ಳಿಯಲ್ಲಿನ ಎರಡು ಕೊಳವೆ ಬಾವಿಗಳಿಂದ ಬೃಹತ್ ಟ್ಯಾಂಕಿಗೆ ನೀರು ಹರಿಸಿ ಅಲ್ಲಿಂದ ಬೀದಿ ನಲ್ಲಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸುವ ವೇಳೆಯೂ ವಿಶಿಷ್ಟ ಮತ್ತು ಜನಸ್ನೇಹಿ. ಬೆಳಿಗ್ಗೆ 6 ರಿಂದ 7 ಮತ್ತು ಸಂಜೆ 7 ರಿಂದ 8ರ ವರೆಗೆ ಬೀದಿ ನಲ್ಲಿಗಳಲ್ಲಿ ನೀರು ಬರುತ್ತದೆ.<br /> <br /> ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ತಮ್ಮ ಕೆಲಸಕ್ಕೆ ಹೋಗುವ ಮುಂಚೆ, ಕೆಲಸಗಳನ್ನು ಮುಗಿಸಿ ಮನೆಗೆ ಬಂದ ಬಳಿಕ ನೀರು ಸಂಗ್ರಹಿಸಬಹುದು. ಈ ವೇಳಾಪಟ್ಟಿಯಿಂದ ಎಲ್ಲರೂ ನೀರು ಸಂಗ್ರಹಿಸಿಡಲು ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ, ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ.<br /> <br /> `ಮೂರು ವರ್ಷದ ಹಿಂದೆ ನಮ್ಮ ಹಳ್ಳಿಯಲ್ಲೂ ನೀರಿನ ಸಮಸ್ಯೆ ಇತ್ತು. ಮನೆಗಳಿಗೆ ನಲ್ಲಿ ಸಂಪರ್ಕ ಪಡೆದಿದ್ದ ಬಹಳಷ್ಟು ಮಂದಿ ನೀರನ್ನು ಮಿತವಾಗಿ ಬಳಸುತ್ತಿರಲಿಲ್ಲ. <br /> <br /> ಎಲ್ಲರಿಗೂ ಸಾಕಾಗುವಷ್ಟು ನೀರು ಸಿಗುತ್ತಿರಲಿಲ್ಲ. ಹೀಗಾಗಿಯೇ ಎಲ್ಲರ ಮನೆಗಳ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಿ ಬೀದಿ ನಲ್ಲಿ ಅಳವಡಿಸುವ ನಿರ್ಧಾರ ಮಾಡಿದೆವು. ಆ ಕೆಲಸವನ್ನೂ ಕೂಡ ಗ್ರಾಮಸ್ಥರೆಲ್ಲರೂ ಸೇರಿಕೊಂಡೇ ಮಾಡಿದ್ದು ಹೆಮ್ಮೆಯ ಸಂಗತಿ. <br /> <br /> ಮನೆ ನಲ್ಲಿ ಸಂಪರ್ಕ ಕಡಿದು ಹಾಕಲು ಪ್ರತಿ ಮನೆಯಿಂದಲೂ ಕನಿಷ್ಠ ಕೂಲಿಗೆ ಒಬ್ಬೊಬ್ಬರು, ಇಬ್ಬರು ಬಂದರು. ಕೆಲಸ ಸಲೀಸಾಯಿತು~ ಎಂದು ಅವರು ಸ್ಮರಿಸುತ್ತಾರೆ.<br /> <br /> <strong> 24 ಗಂಟೆ ನೀರು</strong><br /> ಹಳ್ಳಿಯ ನಡು ಮಧ್ಯೆ ಇರುವ ಓವರ್ಹೆಡ್ ಟ್ಯಾಂಕಿನ ಬುಡದಲ್ಲಿ ನಲ್ಲಿಯೊಂದನ್ನು ಹಾಕಲಾಗಿದೆ. ಆ ನಲ್ಲಿಯಲ್ಲಿ 24 ಗಂಟೆಯೂ ನೀರು ಬರುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೀದಿ ನಲ್ಲಿಯಲ್ಲಿ ಬರುವ ನೀರು ಸಾಲದಿದ್ದರೆ, ರಾಸುಗಳಿಗೆ ನೀರು ಬೇಕೆಂದಾಗ ಯಾರು ಬೇಕಾದರೂ ಈ ನಲ್ಲಿಯಿಂದ ನೀರು ಹಿಡಿಯಬಹುದು. ರಾಸುಗಳಿಗೂ ನೀರು ಕುಡಿಸಬಹುದು. ಇದು ಇಲ್ಲಿನ ವಿಶೇಷ. <br /> <br /> ಪಕ್ಕದ್ಲ್ಲಲೇ ಮತ್ತೊಂದು ವಿಶೇಷವೂ ಇದೆ. ಟ್ಯಾಂಕಿನ ಬುಡದ ಆ ಕಡೆಗೆ ಒಂದು ಕುಂಟೆಯಿದೆ. ಕೊಳವೆ ಬಾವಿಗಳಿಂದ ಟ್ಯಾಂಕಿಗೆ ಹರಿವ ನೀರು ತುಂಬಿದ ಬಳಿಕವೂ ವಿದ್ಯುತ್ ಪೂರೈಕೆ ಇದ್ದರೆ, ನೀರು ಕುಂಟೆಗೆ ಸೇರುವ ವ್ಯವಸ್ಥೆ ಮಾಡಲಾಗಿದೆ. 15 ಅಡಿ ಆಳದ ಕುಂಟೆಯಲ್ಲಿ ಗ್ರಾಮಸ್ಥರು ಮೀನು ಮರಿಗಳನ್ನೂ ಸಾಕುತ್ತಿದ್ದಾರೆ.<br /> <br /> ರಾಸುಗಳಿಗೆ ನೀರು ಬೇಕಾದವರು ಈ ಕುಂಟೆಯಿಂದಲೂ ನೀರು ಪಡೆಯಬಹುದು. ಆದರೆ ರಾಸುಗಳನ್ನು ಕುಂಟೆಗೆ ಇಳಿಸುವಂತಿಲ್ಲ. ಸ್ವಚ್ಛತೆಯನ್ನು ಕಾಪಾಡುವುದಕ್ಕೆಂದೇ ಈ ನಿಯಮವನ್ನು ಅಳವಡಿಸಲಾಗಿದೆ. <br /> <br /> `ನಮ್ಮ ಹಳ್ಳಿಯಲ್ಲಿರುವಂಥ ವ್ಯವಸ್ಥೆ ಸುತ್ತಮುತ್ತಲಿನ ಬೇರೆ ಹಳ್ಳಿಗಳಲ್ಲಿ ಇಲ್ಲವೇ ಇಲ್ಲ~ ಎಂಬುದು ಇಲ್ಲಿನ ಜನರ ಹೆಮ್ಮೆಯ ನುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>