<p>ಗುಲ್ಬರ್ಗ ನಗರದ ಹೊರವಲಯದಲ್ಲಿ ಇರುವ ಈ ಕ್ಷೇತ್ರದ ಹೆಸರು ರಾಮತೀರ್ಥ. ವಿಶೇಷ ಎಂದರೆ ಇಲ್ಲಿನ ದೇವರು ಈಶ್ವರ. ಶಿವರಾತ್ರಿ ಮತ್ತು ಅಮಾವಾಸ್ಯೆ ದಿನ ಇಲ್ಲಿ ಭಕ್ತರ ಸಾಗರವೇ ಹರಿದುಬರುತ್ತದೆ.<br /> <br /> ಶ್ರೀರಾಮ ಸೀತೆಯನ್ನು ಹುಡುಕುತ್ತ ಬಂದು ಈ ಸ್ಥಳದಲ್ಲಿ ಕೆಲ ಕಾಲ ತಂಗುತ್ತಾನೆ. ಶಿವನನ್ನು ಒಲಿಸಿಕೊಳ್ಳಲು ಇಲ್ಲಿ ಪೂಜೆ ಮಾಡುತ್ತಾನೆ ಎನ್ನುತ್ತದೆ ಸ್ಥಳ ಪುರಾಣ.<br /> ನಗರದ ಹೊರವಲಯದಲ್ಲೇ ಇದ್ದರೂ ಮುಳ್ಳು, ಕಲ್ಲು, ಗಿಡ, ಪೊದೆಯಿಂದ ತುಂಬಿಕೊಂಡಿದ್ದ ಸ್ಥಳ ಇದು. <br /> <br /> 1842 ರಲ್ಲಿ ಗರ್ಭಗುಡಿ ನಿರ್ಮಿಸಲಾಗಿತ್ತು. ರತ್ನಾಬಾಯಿ ಕಲ್ಯಾಣಪ್ರಸಾದ ಶುಕ್ಲಾ ಎಂಬ ಭಕ್ತೆ ಇದಕ್ಕೆ 3 ಎಕರೆ 6 ಗುಂಟೆ ಭೂಮಿ ದಾನ ಮಾಡಿದ್ದರು. ಮುಂದೆ 1958ರಲ್ಲಿ ದೇವಸ್ಥಾನದ ನೂತನ ಮಂಟಪ ಕಟ್ಟಲಾಯಿತು. ಈಗಲೂ ದೇವಾಲಯದ ಕಾಮಗಾರಿ ಚಾಲನೆಯಲ್ಲಿದೆ.</p>.<p><br /> ದೇಗುಲದ ಆವರಣದಲ್ಲಿ ಆಲ ಮತ್ತು ಬೇವಿನ ಮರಗಳು ಬೆಳೆದಿವೆ. ಮಕ್ಕಳಾಗದ ವಿವಾಹಿತೆಯರು ಮತ್ತು ಕಂಕಣಭಾಗ್ಯ ಕೂಡಿ ಬರಲಿ ಎಂದು ಯುವತಿಯರು ಇಲ್ಲಿ ಪೂಜೆ ಮಾಡಿ, `ದೇವರ ಮರ~ಗಳಿಗೆ ಪ್ರದಕ್ಷಿಣೆ ಹಾಕುವ ರೂಢಿ ಇದೆ ಎಂದು ಅರ್ಚಕ ಸಿದ್ದ ಭಟ್ ಜೋಶಿ ಹೇಳುತ್ತಾರೆ.<br /> <br /> <strong>ಎಲ್ಲಿದೆ?</strong><br /> ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣದಿಂದ ರಿಂಗ್ ರೋಡ್ ಮಾರ್ಗವಾಗಿ ಐದು ಕಿ.ಮೀ. ದೂರದ ಆಳಂದ ರಸ್ತೆ ಚೆಕ್ ಪೋಸ್ಟ್ ಹತ್ತಿರ ಹೋದರೆ ಈ ದೇವಾಲಯ ಕಾಣುತ್ತದೆ. ಶಿವರಾತ್ರಿ ಅಮಾವಾಸ್ಯೆಯಂದು ದೇವಸ್ಥಾನದ ಗರ್ಭಗುಡಿಗೆ ಮಾಡುವ ಗುಲಾಬಿ ಹೂವಿನ ಶೃಂಗಾರ ನಯನ ಮನೋಹರವಾಗಿರುತ್ತದೆ. ಪ್ರತಿ ದಿನದ ರುದ್ರಾಭಿಷೇಕ ಸೇವೆಗೆ 250 ರೂ ಸೇವಾ ಶುಲ್ಕ ನಿಗದಿಪಡಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಲ್ಬರ್ಗ ನಗರದ ಹೊರವಲಯದಲ್ಲಿ ಇರುವ ಈ ಕ್ಷೇತ್ರದ ಹೆಸರು ರಾಮತೀರ್ಥ. ವಿಶೇಷ ಎಂದರೆ ಇಲ್ಲಿನ ದೇವರು ಈಶ್ವರ. ಶಿವರಾತ್ರಿ ಮತ್ತು ಅಮಾವಾಸ್ಯೆ ದಿನ ಇಲ್ಲಿ ಭಕ್ತರ ಸಾಗರವೇ ಹರಿದುಬರುತ್ತದೆ.<br /> <br /> ಶ್ರೀರಾಮ ಸೀತೆಯನ್ನು ಹುಡುಕುತ್ತ ಬಂದು ಈ ಸ್ಥಳದಲ್ಲಿ ಕೆಲ ಕಾಲ ತಂಗುತ್ತಾನೆ. ಶಿವನನ್ನು ಒಲಿಸಿಕೊಳ್ಳಲು ಇಲ್ಲಿ ಪೂಜೆ ಮಾಡುತ್ತಾನೆ ಎನ್ನುತ್ತದೆ ಸ್ಥಳ ಪುರಾಣ.<br /> ನಗರದ ಹೊರವಲಯದಲ್ಲೇ ಇದ್ದರೂ ಮುಳ್ಳು, ಕಲ್ಲು, ಗಿಡ, ಪೊದೆಯಿಂದ ತುಂಬಿಕೊಂಡಿದ್ದ ಸ್ಥಳ ಇದು. <br /> <br /> 1842 ರಲ್ಲಿ ಗರ್ಭಗುಡಿ ನಿರ್ಮಿಸಲಾಗಿತ್ತು. ರತ್ನಾಬಾಯಿ ಕಲ್ಯಾಣಪ್ರಸಾದ ಶುಕ್ಲಾ ಎಂಬ ಭಕ್ತೆ ಇದಕ್ಕೆ 3 ಎಕರೆ 6 ಗುಂಟೆ ಭೂಮಿ ದಾನ ಮಾಡಿದ್ದರು. ಮುಂದೆ 1958ರಲ್ಲಿ ದೇವಸ್ಥಾನದ ನೂತನ ಮಂಟಪ ಕಟ್ಟಲಾಯಿತು. ಈಗಲೂ ದೇವಾಲಯದ ಕಾಮಗಾರಿ ಚಾಲನೆಯಲ್ಲಿದೆ.</p>.<p><br /> ದೇಗುಲದ ಆವರಣದಲ್ಲಿ ಆಲ ಮತ್ತು ಬೇವಿನ ಮರಗಳು ಬೆಳೆದಿವೆ. ಮಕ್ಕಳಾಗದ ವಿವಾಹಿತೆಯರು ಮತ್ತು ಕಂಕಣಭಾಗ್ಯ ಕೂಡಿ ಬರಲಿ ಎಂದು ಯುವತಿಯರು ಇಲ್ಲಿ ಪೂಜೆ ಮಾಡಿ, `ದೇವರ ಮರ~ಗಳಿಗೆ ಪ್ರದಕ್ಷಿಣೆ ಹಾಕುವ ರೂಢಿ ಇದೆ ಎಂದು ಅರ್ಚಕ ಸಿದ್ದ ಭಟ್ ಜೋಶಿ ಹೇಳುತ್ತಾರೆ.<br /> <br /> <strong>ಎಲ್ಲಿದೆ?</strong><br /> ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣದಿಂದ ರಿಂಗ್ ರೋಡ್ ಮಾರ್ಗವಾಗಿ ಐದು ಕಿ.ಮೀ. ದೂರದ ಆಳಂದ ರಸ್ತೆ ಚೆಕ್ ಪೋಸ್ಟ್ ಹತ್ತಿರ ಹೋದರೆ ಈ ದೇವಾಲಯ ಕಾಣುತ್ತದೆ. ಶಿವರಾತ್ರಿ ಅಮಾವಾಸ್ಯೆಯಂದು ದೇವಸ್ಥಾನದ ಗರ್ಭಗುಡಿಗೆ ಮಾಡುವ ಗುಲಾಬಿ ಹೂವಿನ ಶೃಂಗಾರ ನಯನ ಮನೋಹರವಾಗಿರುತ್ತದೆ. ಪ್ರತಿ ದಿನದ ರುದ್ರಾಭಿಷೇಕ ಸೇವೆಗೆ 250 ರೂ ಸೇವಾ ಶುಲ್ಕ ನಿಗದಿಪಡಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>