<p>ಪ್ರಕೃತಿಪ್ರಿಯರ ಮನಸೆಳೆಯುವ ಮಹಾರಾಷ್ಟ್ರದ ಗಿರಿಧಾಮಗಳಲ್ಲಿ ಪ್ರಮುಖವಾದುದು ಮಾಥೇರಾನ್. ಮಹಾರಾಷ್ಟ್ರದ ಐದು ಪ್ರಸಿದ್ಧ ಗಿರಿಧಾಮಗಳಲ್ಲಿ ಇದೂ ಒಂದು. ಲೋನಾವಾಲಾ, ಖಂಡಾಲಾ, ಮಾಥೇರಾನ್, ಪಂಚಗಣಿ ಹಾಗೂ ಮಹಾಬಲೇಶ್ವರ ಉಳಿದ ನಾಲ್ಕು ಗಿರಿಧಾಮಗಳು.<br /> <br /> ಮಾಥೇರಾನ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಕರ್ಜತ್ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗಿರಿಧಾಮ. ಮುಂಬೈಯಿಂದ 100 ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ಅಂತರದಲ್ಲಿರುವ ಇದು, ಎರಡೂ ಮಹಾನಗರಗಳಿಂದ ರಸ್ತೆ ಹಾಗೂ ರೈಲಿನ ಸಂಪರ್ಕ ಹೊಂದಿದೆ.<br /> <br /> ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಹಚ್ಚಹಸುರಿನಿಂದ ಕಂಗೊಳಿಸುವ, ಇಬ್ಬನಿಯ ಹಾಸಿಗೆಯಿಂದ ಮನಸೆಳೆಯುವ ಈ ಗಿರಿಧಾಮ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.ಮಂಜಿನಿಂದ ಕೂಡಿರುವ ಪರ್ವತಗಳು, ಅಕ್ಷಯಪಾತ್ರೆಗಳಂತೆ ಕಾಣಿಸುವ ದಟ್ಟಕಾಡುಗಳು, ಬೃಹದಾಕಾರದ ಕೋಟೆಗಳು– ಇವುಗಳ ಜೊತೆಗೆ ಪವಿತ್ರ ಯಾತ್ರಾಕ್ಷೇತ್ರವನ್ನೂ ಮಾಥೇರಾನ್ ಹೊಂದಿದೆ. ಈ ಗಿರಿಧಾಮವನ್ನು 1850ರಲ್ಲಿ ಹಗ್ ಪಾಂಲಿಟ್ಟ್ ಮ್ಯಾಲೆಟ್ ಎಂಬ ಬ್ರಿಟಿಷ್ ಕಲೆಕ್ಟರ್ ಕಂಡುಹಿಡಿದರು. ನಂತರದ ದಿನಗಳಲ್ಲಿ ಇದೊಂದು ಬ್ರಿಟಿಷರ ರಜಾದಿನಗಳ ತಾಣವಾಯಿತು.<br /> <br /> ಕಣಿವೆಗಳು, ಕಾಡುಗಳು, ಜಲಪಾತಗಳು, ನದಿಗಳಿಂದ ಕೂಡಿದ ಈ ಪ್ರದೇಶವು ಅಮೂಲ್ಯ ಔಷಧಿ ಮತ್ತು ಆಯುರ್ವೇದ ಸಸ್ಯಗಳನ್ನೂ ಹೇರಳವಾಗಿ ಹೊಂದಿದೆ. ನಿಸರ್ಗದ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಮತ್ತು ವಾರಾಂತ್ಯದ ದಣಿವಾರಿಸಿಕೊಂಡು ಮನಸ್ಸಿಗೆ ಶಾಂತಿ, ನೆಮ್ಮದಿ ಕಾಣಬಯಸುವವರು ಅವಶ್ಯಕವಾಗಿ ಈ ಗಿರಿಧಾಮವನ್ನು ನೋಡಲೇಬೇಕು. <br /> <br /> ದಟ್ಟವಾದ ಕಾಡಿನ ಮಧ್ಯಭಾಗದಲ್ಲಿರುವ ಮಾಥೇರಾನ್ ತನ್ನ 38 ವೀಕ್ಷಣಾ ಸ್ಥಳಗಳಿಂದಾಗಿ ಅತ್ಯಂತ ಪ್ರಸಿದ್ಧವಾಗಿದೆ. ಈ ಕೇಂದ್ರಗಳಲ್ಲಿ ನಿಂತು ಬೆಟ್ಟ ಗುಡ್ಡಗಳ ರೋಮಾಂಚಕಾರಿ ಪ್ರಕೃತಿಯ ಜೊತೆಗೆ, ರುದ್ರ ರಮಣೀಯ ಪ್ರಪಾತ ಹಾಗೂ ಕಣಿವೆಗಳನ್ನು ಆಸ್ವಾದಿಸಬಹುದು. ‘ಪನೋರಮಾ ಪಾಯಿಂಟ್’, ‘ವನ್ ಥ್ರಿ ಹಿಲ್ ಪಾಯಿಂಟ್’, ‘ಹಾರ್ಟ್ ಪಾಯಿಂಟ್’ ಹಾಗೂ ‘ರಾಮ್ಬಾಗ್ ಪಾಯಿಂಟ್’ ಇಲ್ಲಿರುವ ಕೆಲವು ಪ್ರಮುಖ ವೀಕ್ಷಣಾ ಕೇಂದ್ರಗಳು.</p>.<p>‘ಪನೋರಮಾ ಪಾಯಿಂಟ್’ ಸೂರ್ಯೋದಯ ದೃಶ್ಯಗಳನ್ನು ನೋಡಲು ಪ್ರಸಿದ್ಧಿ. ಈ ಪ್ರದೇಶವು ಅತ್ಯಂತ ಎತ್ತರದ ಕೇಂದ್ರವಾಗಿದೆ. ಇಲ್ಲಿ ನಿಂತು ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆ ಮಾಡಬಹುದು.<br /> <br /> ವಾಹನಗಳ ಚಲನವಲನಕ್ಕೆ ಮಾಥೇರಾನ್ನಲ್ಲಿ ನಿರ್ಬಂಧ ಹೇರಲಾಗಿದೆ. ಈ ಗಿರಿಧಾಮವು ಇಲ್ಲಿಂದ 8 ಕಿ.ಮೀ ಅಂತರದಲ್ಲಿರುವ ನೇರನ್ ಎಂಬ ಪುಟ್ಟ ಪಟ್ಟಣದೊಂದಿಗೆ ಸಂಪರ್ಕ ಹೊಂದಿದೆ. ಈ ಪಟ್ಟಣದವರೆಗೆ ಡಾಂಬರೀಕರಣಗೊಂಡ ರಸ್ತೆಯಿದೆ. ಇಲ್ಲಿಯವರೆಗೆ ಮಾತ್ರ ವಾಹನ ಸಂಚಾರವಿರುತ್ತದೆ.</p>.<p>ಇಲ್ಲಿಂದ ಮುಂದೆ ಚಲಿಸಲು ವಾಹನಗಳಿಗೆ ಅನುಮತಿ ಇಲ್ಲ, ಬದಲಾಗಿ ಈ ಪಟ್ಟಣದಿಂದ ಒಂದು ಪುಟಾಣಿ ರೈಲು ಮಾಥೇರಾನ್ಗೆ ಸಂಪರ್ಕ ಸಾಧಿಸುತ್ತದೆ. ನ್ಯಾರೋಗೇಜ್ ಹಳಿಗಳ ಮೇಲೆ ಓಡುವ ರೈಲು ನೇರಲ್ ಪಟ್ಟಣದಿಂದ ಸುಮಾರು 12 ಮೈಲಿಯ ಅಂತರದಲ್ಲಿರುವ ಮಾಥೇರಾನ್ ತಲುಪಲು ಸುಮಾರು 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ರೈಲಿನಲ್ಲಿ ಕುಳಿತು ಸುತ್ತಮುತ್ತಲಿನ ಸುಂದರ ಪರಿಸರ ವೀಕ್ಷಿಸುವುದು ಕೂಡ ಒಂದು ಅಪೂರ್ವ ಅನುಭವ.<br /> <br /> ಮಾಥೇರಾನ್ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಕುದುರೆ ಇಲ್ಲವೇ ಕೈರಿಕ್ಷಾಗಳನ್ನೇ ಅವಲಂಬಿಸಬೇಕು. ಇಲ್ಲದಿದ್ದರೆ ನಡೆದುಕೊಂಡು ಹೋಗಬೇಕು. ಚಾರ್ಲೊಟ್ಕೆರೆ ಅಥವಾ ಶಾರ್ಲೆಟ್ ಕೆರೆ ಇಲ್ಲಿನ ಮತ್ತೊಂದು ಆಕರ್ಷಣೆ. ಈ ಕೆರೆಯು ಪಿಸಾರ್ನಾಥ್ ದೇವಸ್ಥಾನದ ಬಲಭಾಗಕ್ಕೆ ಇದೆ. ವರ್ಷಪೂರ್ತಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಕೆರೆಯ ಪಕ್ಕದಲ್ಲಿ ವಿಭಿನ್ನ ಜಾತಿಯ ಪಕ್ಷಿಗಳು ನೋಡಲು ಸಿಗುತ್ತವೆ.</p>.<p>ಇರುಳಿನಲ್ಲಿ ಮಾಥೇರಾನ್ನಲ್ಲಿ ನಿಂತು ಮುಂಬೈನ ಕೃತಕ ಸಾಲುದೀಪಗಳನ್ನು ನೋಡಬಹುದು. ಮರಾಠರು ಮತ್ತು ಮೊಘಲರ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಒಂದು ಅದ್ಭುತವಾದ – ಸುಂದರವಾದ ಕೋಟೆ ಇದೆ.<br /> <br /> ಪ್ರಬಲ್ಕೋಟೆ ಹೆಸರಿನ ಇದನ್ನು ಶಿವಾಜಿ ತಮ್ಮ ಆಡಳಿತದಲ್ಲಿ ಶಸ್ತ್ರಾಗಾರವಾಗಿ ಬಳಸುತ್ತಿದ್ದರಂತೆ. ಕೋಟೆಯಲ್ಲಿ ಇರುವವರಿಗೆ ನೀರಿನ ಕೊರತೆಯಾಗದಂತೆ, ಕೋಟೆಯ ಮೇಲೆ ನಿರ್ಮಿಸಲಾಗಿರುವ ನೀರಿನ ಕೊಳ ನೋಡುಗರ ಗಮನಸೆಳೆಯುವಂತಿದೆ. ಈಗಲೂ ಸುಸ್ಥಿತಿಯಲ್ಲಿರುವ ಪ್ರಬಲ್ಕೋಟೆ ಮೂರು ಗೋಪುರಗಳನ್ನು ಹೊಂದಿದೆ. <br /> <br /> ಪ್ರಕೃತಿಪ್ರಿಯರು, ಇತಿಹಾಸದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ–ವಯೋಮಾನದ ಪ್ರವಾಸಿಗರ ಪಾಲಿಗೆ ಮಾಥೇರಾನ್ ಬೇರೆ ಬೇರೆ ಕಾರಣಗಳಿಂದಾಗಿ ಆಪ್ಯಾಯಮಾನ ಎನ್ನಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಕೃತಿಪ್ರಿಯರ ಮನಸೆಳೆಯುವ ಮಹಾರಾಷ್ಟ್ರದ ಗಿರಿಧಾಮಗಳಲ್ಲಿ ಪ್ರಮುಖವಾದುದು ಮಾಥೇರಾನ್. ಮಹಾರಾಷ್ಟ್ರದ ಐದು ಪ್ರಸಿದ್ಧ ಗಿರಿಧಾಮಗಳಲ್ಲಿ ಇದೂ ಒಂದು. ಲೋನಾವಾಲಾ, ಖಂಡಾಲಾ, ಮಾಥೇರಾನ್, ಪಂಚಗಣಿ ಹಾಗೂ ಮಹಾಬಲೇಶ್ವರ ಉಳಿದ ನಾಲ್ಕು ಗಿರಿಧಾಮಗಳು.<br /> <br /> ಮಾಥೇರಾನ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಕರ್ಜತ್ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗಿರಿಧಾಮ. ಮುಂಬೈಯಿಂದ 100 ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ಅಂತರದಲ್ಲಿರುವ ಇದು, ಎರಡೂ ಮಹಾನಗರಗಳಿಂದ ರಸ್ತೆ ಹಾಗೂ ರೈಲಿನ ಸಂಪರ್ಕ ಹೊಂದಿದೆ.<br /> <br /> ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಹಚ್ಚಹಸುರಿನಿಂದ ಕಂಗೊಳಿಸುವ, ಇಬ್ಬನಿಯ ಹಾಸಿಗೆಯಿಂದ ಮನಸೆಳೆಯುವ ಈ ಗಿರಿಧಾಮ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.ಮಂಜಿನಿಂದ ಕೂಡಿರುವ ಪರ್ವತಗಳು, ಅಕ್ಷಯಪಾತ್ರೆಗಳಂತೆ ಕಾಣಿಸುವ ದಟ್ಟಕಾಡುಗಳು, ಬೃಹದಾಕಾರದ ಕೋಟೆಗಳು– ಇವುಗಳ ಜೊತೆಗೆ ಪವಿತ್ರ ಯಾತ್ರಾಕ್ಷೇತ್ರವನ್ನೂ ಮಾಥೇರಾನ್ ಹೊಂದಿದೆ. ಈ ಗಿರಿಧಾಮವನ್ನು 1850ರಲ್ಲಿ ಹಗ್ ಪಾಂಲಿಟ್ಟ್ ಮ್ಯಾಲೆಟ್ ಎಂಬ ಬ್ರಿಟಿಷ್ ಕಲೆಕ್ಟರ್ ಕಂಡುಹಿಡಿದರು. ನಂತರದ ದಿನಗಳಲ್ಲಿ ಇದೊಂದು ಬ್ರಿಟಿಷರ ರಜಾದಿನಗಳ ತಾಣವಾಯಿತು.<br /> <br /> ಕಣಿವೆಗಳು, ಕಾಡುಗಳು, ಜಲಪಾತಗಳು, ನದಿಗಳಿಂದ ಕೂಡಿದ ಈ ಪ್ರದೇಶವು ಅಮೂಲ್ಯ ಔಷಧಿ ಮತ್ತು ಆಯುರ್ವೇದ ಸಸ್ಯಗಳನ್ನೂ ಹೇರಳವಾಗಿ ಹೊಂದಿದೆ. ನಿಸರ್ಗದ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಮತ್ತು ವಾರಾಂತ್ಯದ ದಣಿವಾರಿಸಿಕೊಂಡು ಮನಸ್ಸಿಗೆ ಶಾಂತಿ, ನೆಮ್ಮದಿ ಕಾಣಬಯಸುವವರು ಅವಶ್ಯಕವಾಗಿ ಈ ಗಿರಿಧಾಮವನ್ನು ನೋಡಲೇಬೇಕು. <br /> <br /> ದಟ್ಟವಾದ ಕಾಡಿನ ಮಧ್ಯಭಾಗದಲ್ಲಿರುವ ಮಾಥೇರಾನ್ ತನ್ನ 38 ವೀಕ್ಷಣಾ ಸ್ಥಳಗಳಿಂದಾಗಿ ಅತ್ಯಂತ ಪ್ರಸಿದ್ಧವಾಗಿದೆ. ಈ ಕೇಂದ್ರಗಳಲ್ಲಿ ನಿಂತು ಬೆಟ್ಟ ಗುಡ್ಡಗಳ ರೋಮಾಂಚಕಾರಿ ಪ್ರಕೃತಿಯ ಜೊತೆಗೆ, ರುದ್ರ ರಮಣೀಯ ಪ್ರಪಾತ ಹಾಗೂ ಕಣಿವೆಗಳನ್ನು ಆಸ್ವಾದಿಸಬಹುದು. ‘ಪನೋರಮಾ ಪಾಯಿಂಟ್’, ‘ವನ್ ಥ್ರಿ ಹಿಲ್ ಪಾಯಿಂಟ್’, ‘ಹಾರ್ಟ್ ಪಾಯಿಂಟ್’ ಹಾಗೂ ‘ರಾಮ್ಬಾಗ್ ಪಾಯಿಂಟ್’ ಇಲ್ಲಿರುವ ಕೆಲವು ಪ್ರಮುಖ ವೀಕ್ಷಣಾ ಕೇಂದ್ರಗಳು.</p>.<p>‘ಪನೋರಮಾ ಪಾಯಿಂಟ್’ ಸೂರ್ಯೋದಯ ದೃಶ್ಯಗಳನ್ನು ನೋಡಲು ಪ್ರಸಿದ್ಧಿ. ಈ ಪ್ರದೇಶವು ಅತ್ಯಂತ ಎತ್ತರದ ಕೇಂದ್ರವಾಗಿದೆ. ಇಲ್ಲಿ ನಿಂತು ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆ ಮಾಡಬಹುದು.<br /> <br /> ವಾಹನಗಳ ಚಲನವಲನಕ್ಕೆ ಮಾಥೇರಾನ್ನಲ್ಲಿ ನಿರ್ಬಂಧ ಹೇರಲಾಗಿದೆ. ಈ ಗಿರಿಧಾಮವು ಇಲ್ಲಿಂದ 8 ಕಿ.ಮೀ ಅಂತರದಲ್ಲಿರುವ ನೇರನ್ ಎಂಬ ಪುಟ್ಟ ಪಟ್ಟಣದೊಂದಿಗೆ ಸಂಪರ್ಕ ಹೊಂದಿದೆ. ಈ ಪಟ್ಟಣದವರೆಗೆ ಡಾಂಬರೀಕರಣಗೊಂಡ ರಸ್ತೆಯಿದೆ. ಇಲ್ಲಿಯವರೆಗೆ ಮಾತ್ರ ವಾಹನ ಸಂಚಾರವಿರುತ್ತದೆ.</p>.<p>ಇಲ್ಲಿಂದ ಮುಂದೆ ಚಲಿಸಲು ವಾಹನಗಳಿಗೆ ಅನುಮತಿ ಇಲ್ಲ, ಬದಲಾಗಿ ಈ ಪಟ್ಟಣದಿಂದ ಒಂದು ಪುಟಾಣಿ ರೈಲು ಮಾಥೇರಾನ್ಗೆ ಸಂಪರ್ಕ ಸಾಧಿಸುತ್ತದೆ. ನ್ಯಾರೋಗೇಜ್ ಹಳಿಗಳ ಮೇಲೆ ಓಡುವ ರೈಲು ನೇರಲ್ ಪಟ್ಟಣದಿಂದ ಸುಮಾರು 12 ಮೈಲಿಯ ಅಂತರದಲ್ಲಿರುವ ಮಾಥೇರಾನ್ ತಲುಪಲು ಸುಮಾರು 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ರೈಲಿನಲ್ಲಿ ಕುಳಿತು ಸುತ್ತಮುತ್ತಲಿನ ಸುಂದರ ಪರಿಸರ ವೀಕ್ಷಿಸುವುದು ಕೂಡ ಒಂದು ಅಪೂರ್ವ ಅನುಭವ.<br /> <br /> ಮಾಥೇರಾನ್ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಕುದುರೆ ಇಲ್ಲವೇ ಕೈರಿಕ್ಷಾಗಳನ್ನೇ ಅವಲಂಬಿಸಬೇಕು. ಇಲ್ಲದಿದ್ದರೆ ನಡೆದುಕೊಂಡು ಹೋಗಬೇಕು. ಚಾರ್ಲೊಟ್ಕೆರೆ ಅಥವಾ ಶಾರ್ಲೆಟ್ ಕೆರೆ ಇಲ್ಲಿನ ಮತ್ತೊಂದು ಆಕರ್ಷಣೆ. ಈ ಕೆರೆಯು ಪಿಸಾರ್ನಾಥ್ ದೇವಸ್ಥಾನದ ಬಲಭಾಗಕ್ಕೆ ಇದೆ. ವರ್ಷಪೂರ್ತಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಕೆರೆಯ ಪಕ್ಕದಲ್ಲಿ ವಿಭಿನ್ನ ಜಾತಿಯ ಪಕ್ಷಿಗಳು ನೋಡಲು ಸಿಗುತ್ತವೆ.</p>.<p>ಇರುಳಿನಲ್ಲಿ ಮಾಥೇರಾನ್ನಲ್ಲಿ ನಿಂತು ಮುಂಬೈನ ಕೃತಕ ಸಾಲುದೀಪಗಳನ್ನು ನೋಡಬಹುದು. ಮರಾಠರು ಮತ್ತು ಮೊಘಲರ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಒಂದು ಅದ್ಭುತವಾದ – ಸುಂದರವಾದ ಕೋಟೆ ಇದೆ.<br /> <br /> ಪ್ರಬಲ್ಕೋಟೆ ಹೆಸರಿನ ಇದನ್ನು ಶಿವಾಜಿ ತಮ್ಮ ಆಡಳಿತದಲ್ಲಿ ಶಸ್ತ್ರಾಗಾರವಾಗಿ ಬಳಸುತ್ತಿದ್ದರಂತೆ. ಕೋಟೆಯಲ್ಲಿ ಇರುವವರಿಗೆ ನೀರಿನ ಕೊರತೆಯಾಗದಂತೆ, ಕೋಟೆಯ ಮೇಲೆ ನಿರ್ಮಿಸಲಾಗಿರುವ ನೀರಿನ ಕೊಳ ನೋಡುಗರ ಗಮನಸೆಳೆಯುವಂತಿದೆ. ಈಗಲೂ ಸುಸ್ಥಿತಿಯಲ್ಲಿರುವ ಪ್ರಬಲ್ಕೋಟೆ ಮೂರು ಗೋಪುರಗಳನ್ನು ಹೊಂದಿದೆ. <br /> <br /> ಪ್ರಕೃತಿಪ್ರಿಯರು, ಇತಿಹಾಸದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ–ವಯೋಮಾನದ ಪ್ರವಾಸಿಗರ ಪಾಲಿಗೆ ಮಾಥೇರಾನ್ ಬೇರೆ ಬೇರೆ ಕಾರಣಗಳಿಂದಾಗಿ ಆಪ್ಯಾಯಮಾನ ಎನ್ನಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>