ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡಿದ್ದು 10 ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಎಲ್ಲರಿಗೂ ಶನಿವಾರದೊಳಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಅವರ ನಿರ್ಧಾರದಂತೆ ಮಂತ್ರಿಮಂಡಲ ವಿಸ್ತರಣೆ ಆಗಿದೆ. ಶೀಘ್ರ ಸಂಪುಟ ಪುನರ್ ರಚನೆಯಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಪಕ್ಷದ ಶಾಸಕರು ಅಸಮಾಧಾನಗೊಳ್ಳುವ ಅಗತ್ಯ ಇಲ್ಲ, ಎಲ್ಲರಿಗೂ ಅವಕಾಶ ಸಿಗಲಿದೆ, ಶೀಘ್ರವಾಗಿ ಸಂಪುಟ ಪುನರ್ ರಚನೆಗೊಳ್ಳಲಿದೆ ಎಂದರು.
ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಶ್ರೀಮಂತ ಪಾಟೀಲ್
ಮಂಡ್ಯದ ಕೆ.ಆರ್. ಪೇಟೆಯ ಕೈಗೋವನ ಹಳ್ಳಿಯ ಪುಟ್ಟಮ್ಮ ಚಿಕ್ಕೆಗೌಡನ ಮಗನಾದ ನಾರಾಯಣಗೌಡ ಆದ ನಾನು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇನೆ
ದೇವರು ಮತ್ತು ತಂದೆ ತಾಯಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕಾಮಾಕ್ಷಿಪಾಳ್ಯ ಕೆ ಗೋಪಾಲಯ್ಯ
ದೇವರು, ನನ್ನ ಕ್ಷೇತ್ರದ ಜನತೆ, ತಂದೆ ತಾಯಿ ಹಾಗೂ ಬಸವಣ್ಣನವರ ಹೆಸರಿನಲ್ಲಿ ಬಿ.ಸಿ.ಪಾಟೀಲ್ ಪ್ರಮಾಣವಚನ ಸ್ವೀಕಾರ ಮಾಡಿದರು.
ದೇವರು ಮತ್ತು ತಂದೆ ತಾಯಿ ಹೆಸರಿನಲ್ಲಿ ಶಿವರಾಮ್ ಹೆಬ್ಬಾರ್ ಪ್ರಮಾಣವಚನ ಸ್ವೀಕರಿಸಿದರು