ಪದ್ಮನಾಭನಗರ ವಾರ್ಡ್ನ ಬಿಬಿಎಂಪಿ ಕಚೇರಿ ಕೂಡ ಹತ್ತಿರದಲ್ಲೇ ಇದೆ. ಬಸ್ ನಿಲ್ದಾಣ ಕೂಡ ಹತ್ತಿರದಲ್ಲೇ ಇದೆ. ಬನಶಂಕರಿ, ಜಯದೇವ, ಸಿಲ್ಕ್ಬೋರ್ಡ್, ಮಾರತ್ತಹಳ್ಳಿ, ಇಂದಿರಾನಗರ, ಕೋರಮಂಗಲ ಕಡೆ ಹೋಗುವ ಹತ್ತಾರು ಬಸ್ಗಳನ್ನು ಏರಲು ಜನರು ಇಲ್ಲಿಗೆ ಬರುತ್ತಾರೆ. ಅವರೆಲ್ಲಾ ಶೌಚಾಲಯದ ಹಿಂದಿರುವ ಉದ್ಯಾನವನದ ಪಕ್ಕದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಜನರು ಓಡಾಡದ ವಾತಾವರಣ ನಿರ್ಮಾಣವಾಗಿದೆ. ಬಸ್ ನಿಲ್ದಾಣವೆಲ್ಲಾ ಮೂತ್ರದ ವಾಸನೆಯಿಂದ ತುಂಬಿಕೊಂಡಿದ್ದು ಜನರು ಬಸ್ಗಾಗಿ ಕಾಯಲು ಕಷ್ಟ ಪಡುತ್ತಿದ್ದಾರೆ.