<p><strong>ಉಚಿತ ಕೆಎಎಸ್ ತರಬೇತಿ</strong><br /> ಇತ್ತೀಚೆಗೆ ಕೆಎಎಸ್ ಪರೀಕ್ಷೆಯ ಪಠ್ಯಕ್ರಮ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ, ಆಸ್ಪೈರ್ ಸ್ಟಡಿ ಸರ್ಕಲ್ ಭಾನುವಾರ ಬೆಳಿಗ್ಗೆ 10 ರಿಂದ ಒಂದು ದಿನದ ಉಚಿತ ತರಬೇತಿ ಶಿಬಿರ ಏರ್ಪಡಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ದಡ್ಡೆ ತಿಳಿಸಿದ್ದಾರೆ. <br /> <br /> ಮಾಹಿತಿಗೆ: ನಂ. 471, 11ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ಅಂಚೆ ಕಚೇರಿ ಹತ್ತಿರ ( ಪಾರ್ಕ್ ಮುಂಭಾಗ) ವಿಜಯನಗರ. ದೂ: 95380 83216, 96868 30614.<br /> <br /> <strong>ಮುಖವಾಡಕ್ಕೆ ಬಣ್ಣ</strong><br /> ಆಕ್ಸ್ಫರ್ಡ್ ಬುಕ್ ಸ್ಟೋರ್, ಜಾಲಿ ಗೋ ಕಿಡ್ಸ್ ಸಹಯೋಗದಲ್ಲಿ ಶನಿವಾರ 4ರಿಂದ 7 ವರ್ಷದೊಳಗಿನ ಮಕ್ಕಳಿಗಾಗಿ `ಮಾಸ್ಕ್ ಕಲರಿಂಗ್~ (ಮುಖವಾಡಕ್ಕೆ ಬಣ್ಣ ತುಂಬುವುದು) ಕಾರ್ಯಾಗಾರ ಆಯೋಜಿಸಿದೆ. <br /> <br /> ಪ್ರಾಣಿಗಳ ಮುಖ, ಜನಪ್ರಿಯ ಕಾರ್ಟೂನ್ಗಳ ಮುಖವಾಡಗಳಿಗೆ ಬಣ್ಣ ಹಚ್ಚುವ ವಿಧಾನ ಕುರಿತು ಹೇಳಿಕೊಡಲಾಗುವುದು. ಬಣ್ಣ ಹಾಗೂ ಮತ್ತಿತರ ಪರಿಕರಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು.<br /> <br /> ಸ್ಥಳ: ಆಕ್ಸ್ಫರ್ಡ್ ಬುಕ್ಸ್ಟೋರ್, ಕಾಸ್ಮಾಸ್ ಮಾಲ್, ಮೊದಲ ಮಹಡಿ, ಐಟಿಪಿಎಲ್ ರಸ್ತೆ, ಬ್ರೂಕ್ಫೀಲ್ಡ್, ಕುಂದನಹಳ್ಳಿ. ನೋಂದಣಿ ಹಾಗೂ ಮಾಹಿತಿಗೆ: 97391 05306, 4115 5223. <br /> <br /> <strong>ನೊಬೆಲ್ ಕ್ವಿಜ್</strong><br /> ಮೈಸೂರು ರಸ್ತೆ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 10ಕ್ಕೆ ಸ್ವೀಡನ್ ಇಂಡಿಯಾ ನೊಬೆಲ್ ಸ್ಮಾರಕ ಅಂತರ್ ಕಾಲೇಜು ಕ್ವಿಜ್ 2011 ನಡೆಯಲಿದೆ.<br /> <br /> ನಗರದ ಪ್ರತಿಷ್ಠಿತ ಕಾಲೇಜು ಹಾಗೂ ತಾಂತ್ರಿಕ ಕಾಲೇಜು ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಕೌನ್ ಬನೆಗಾ ಕರೋಡ್ಪತಿಯ ಸಂಶೋಧನಾ ಮುಖ್ಯಸ್ಥ ಕ್ವಿಜ್ ಮಾಸ್ಟರ್ ಅದಿತ್ಯನಾಥ್ ಮುಬಾಯಿ ನಡೆಸಿಕೊಡಲಿದ್ದಾರೆ. ವಿಜೇತರು ದೆಹಲಿಯ ಐಐಟಿಯಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದ್ದಾರೆ. <br /> <br /> ಈ ಸಂದರ್ಭದಲ್ಲಿ ಅಂಚೆಚೀಟಿ ಸಂಗ್ರಹಕಾರ ಡಾ.ಸಂಗೊರಾಂ ಅವರು ಸಂಗ್ರಹಿಸಿರುವ 80 ಪುಟಗಳ ಅಂಚೆ ಚೀಟಿಗಳ ಪ್ರದರ್ಶನವೂ ಇದೆ.<br /> <br /> <strong>ಸುರಾನಾ ಯುವೋತ್ಸವ<br /> </strong>ಸೌಥ್ಎಂಡ್ ರಸ್ತೆಯಲ್ಲಿರುವ ಸುರಾನಾ ಕಾಲೇಜು ಮಂಗಳವಾರ ಮತ್ತು ಬುಧವಾರ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಅಂತರ್ ಕಾಲೇಜು `ಯುವ ನೋವಾ~ ಉತ್ಸವವನ್ನು ಆಯೋಜಿಸಿದೆ. <br /> <br /> ಪಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ವಿಸರ್ಡ್, ರೆಸ್ಟೊರೆಂಟ್, ಆಸ್ಪತ್ರೆ, ಕೆಫೆ, ರೆಸಾರ್ಟ್, ಮನರಂಜನೆಗೆ ಸಂಬಂಧಿಸಿದಂತೆ ತಯಾರಿಸಿದ ಹೊಸ ಯೋಜನೆಗಳ ಪ್ರಸ್ತುತಿ ಹಾಗೂ ಷೆಫ್ ರೆಕ್ ಸ್ಪರ್ಧೆ ಇದೆ. <br /> <br /> ಪದವಿ ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ವ್ಯವಸ್ಥಾಪಕ (ಬೆಸ್ಟ್ ಮ್ಯಾನೇಜರ್), ಹಣಕಾಸು, ಮಾನವ ಸಂಪನ್ಮೂಲ, ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಬ್ಯುಸಿನೆಸ್ ಕ್ವಿಜ್ನಲ್ಲಿ ಪಾಲ್ಗೊಳ್ಳಬಹುದು. <br /> <br /> ಪತ್ರಿಕೋದ್ಯಮ ಹಾಗೂ ಮಾನವಿಕ ವಿಭಾಗದಲ್ಲಿ ಹೋಕಸ್ ಪೋಕಸ್, ಹೆಡ್~ನ್ ಕ್ಯಾಪ್ ಇಟ್, ನ್ಯೂಸ್ಕ್ಯಾಸ್ಟರ್, ಚರ್ಚಾ ಸ್ಪರ್ಧೆ, ಪ್ರಬಂಧ, ಮಾದರಿ ತಯಾರಿಕೆ ಸ್ಪರ್ಧೆಗಳಿರುತ್ತವೆ. <br /> <br /> ವಿಜ್ಞಾನದ ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ ಸ್ಪರ್ಧೆ ಇರುತ್ತದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ವೆಬ್ ಡಿಸೈನಿಂಗ್, ಪ್ರಾಜೆಕ್ಟ್ ಪ್ರಸ್ತುತಿ, ಚರ್ಚಾ ಸ್ಪರ್ಧೆ ಇರುತ್ತದೆ. <br /> <br /> ಸಾಹಿತ್ಯದ ವಿದ್ಯಾರ್ಥಿಗಳಿಗಾಗಿ ಭಾಷೆ ಮತ್ತು ಸಾಹಿತ್ಯ ಕ್ವಿಜ್, ಗೆಸ್ ವಾಟ್?, ಬೇಂದ್ರೆ ಗೀತೆ ಗಾಯನ, ನಿಬಂಧ ಲೇಖನ, ಸಂಸ್ಕೃತ ವೃಂದ ಗೀತ ಗಾಯನ ಇದೆ. <br /> <br /> ಮನಃಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಥಿಂಕಿಂಗ್ ಕ್ಯಾಪ್, ಫರ್ಗೆಟಿಟ್ ನಾಟ್ ಮೊದಲಾದ ಸ್ಪರ್ಧೆಗಳಿವೆ. ಜೊತೆಗೆ ಗ್ರೂಪ್ ಡ್ಯಾನ್ಸ್, ಫ್ಯಾಷನ್ ಶೋ ಸಹ ಇರುತ್ತದೆ. <br /> ಮಾಹಿತಿಗೆ: 97431 20188, 97437 04103, 88614 28056, 95352 19974. <br /> <br /> <strong>ಉದಯ ಚಿತ್ರ ಪ್ರಶಸ್ತಿ</strong><br /> ವಿವೆಲ್ ಆ್ಯಕ್ಟಿವ್ ಫೇರ್ ಉದಯ ಫಿಲ್ಮ್ಫೇರ್ ಅವಾರ್ಡ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಲಿದೆ. <br /> <br /> ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅತಿಥಿಗಳು. ಇದೇ ಸಂದರ್ಭದಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟ ಶ್ರೀನಾಥ್ ಹಾಗೂ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಗುವುದು. <br /> <br /> ಬೆಳ್ಳಿಹಬ್ಬ ವಿಶೇಷ ಪ್ರಶಸ್ತಿ ವಿಜೇತರು: ನಟ ಶಿವರಾಜ್ ಕುಮಾರ್, ರಮೇಶ್, ದೇವರಾಜ್, ನಟಿ ಸುಧಾರಾಣಿ, ತಾರಾ. ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ. ಸಂಜೆ 6.30. <br /> <br /> <strong>ಆಸ್ತಮಾ ಶಿಬಿರ</strong><br /> ಎಚ್ಬಿಆರ್ ಲೇಔಟ್ನಲ್ಲಿರುವ ಆಯುರ್ವೇದ ಕುಟೀರಂ ಭಾನುವಾರ ಉಚಿತ ಆಸ್ತಮಾ, ಅಲರ್ಜಿ, ಸಿಓಪಿಡಿ ಶಿಬಿರ ಏರ್ಪಡಿಸಿದೆ. ಡಾ. ಸೀತಾರಾಂ ಪ್ರಸಾದ್ ಅವರು ಚಿಕಿತ್ಸೆ ನೀಡಲಿದ್ದಾರೆ. ಸ್ಥಳ: ನಂ.438, ಬಿಡಿಎ ಕಾಂಪ್ಲೆಕ್ಸ್ ಎದುರು, ಎಚ್ಬಿಆರ್ ಲೇಔಟ್. ನೋಂದಣಿಗೆ: 2543 7177, 98450 02455. <br /> <br /> <strong><span id="1315572600963S" style="display: none"> </span>ಮಧುಮೇಹ ಆಹಾರ<br /> </strong>ಎಂ.ಎಸ್.ರಾಮಯ್ಯ ಆಸ್ಪತ್ರೆ ಮಧುಮೇಹ ರೋಗಿಗಳಿಗೆ ಶನಿವಾರ `ಮಧುಮೇಹ ಆಹಾರ ಪ್ರಾತ್ಯಕ್ಷಿಕೆ~ ಆಯೋಜಿಸಿದೆ. ಸ್ಥಳ: ಮೆಟ್ರೊಪೊಲೀಸ್ ಲ್ಯಾಬೊರೇಟರಿ ಎದುರು, ಎಂ.ಎಸ್.ರಾಮಯ್ಯ ಆಸ್ಪತ್ರೆ ನೆಲಮಹಡಿ, ಎಂಎಸ್ಆರ್ ನಗರ. ಮಾಹಿತಿ ಮತ್ತು ನೋಂದಣಿಗೆ: 2218 3028.<br /> <br /> <strong>ಇನ್ಫೈನೈಟ್ ಸ್ಪರ್ಧೆ</strong><br /> ಇಂಡಿಯನ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ (ಐಇಇಎಂಎ) ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಎಂಜಿನಿಯರ್ ಇನ್ಫೈನೈಟ್ 2012 ಸ್ಪರ್ಧೆ ಆಯೋಜಿಸಿದ್ದು, ಅರ್ಜಿ ಸಲ್ಲಿಸಲು ಸೆ.15 ಕೊನೆ.<br /> <br /> ಇದು ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಾಗಿದೆ. ಸ್ಪರ್ಧೆಯಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಇತರೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿಜೇತರಿಗೆ ರೂ 2 ಲಕ್ಷ ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯ ಮಾಹಿತಿ ಮತ್ತು ನೋಂದಣಿಗೆ: <a href="http://www.ei12.elecrama.com"><strong>www.ei12.elecrama.com</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಚಿತ ಕೆಎಎಸ್ ತರಬೇತಿ</strong><br /> ಇತ್ತೀಚೆಗೆ ಕೆಎಎಸ್ ಪರೀಕ್ಷೆಯ ಪಠ್ಯಕ್ರಮ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ, ಆಸ್ಪೈರ್ ಸ್ಟಡಿ ಸರ್ಕಲ್ ಭಾನುವಾರ ಬೆಳಿಗ್ಗೆ 10 ರಿಂದ ಒಂದು ದಿನದ ಉಚಿತ ತರಬೇತಿ ಶಿಬಿರ ಏರ್ಪಡಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ದಡ್ಡೆ ತಿಳಿಸಿದ್ದಾರೆ. <br /> <br /> ಮಾಹಿತಿಗೆ: ನಂ. 471, 11ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ಅಂಚೆ ಕಚೇರಿ ಹತ್ತಿರ ( ಪಾರ್ಕ್ ಮುಂಭಾಗ) ವಿಜಯನಗರ. ದೂ: 95380 83216, 96868 30614.<br /> <br /> <strong>ಮುಖವಾಡಕ್ಕೆ ಬಣ್ಣ</strong><br /> ಆಕ್ಸ್ಫರ್ಡ್ ಬುಕ್ ಸ್ಟೋರ್, ಜಾಲಿ ಗೋ ಕಿಡ್ಸ್ ಸಹಯೋಗದಲ್ಲಿ ಶನಿವಾರ 4ರಿಂದ 7 ವರ್ಷದೊಳಗಿನ ಮಕ್ಕಳಿಗಾಗಿ `ಮಾಸ್ಕ್ ಕಲರಿಂಗ್~ (ಮುಖವಾಡಕ್ಕೆ ಬಣ್ಣ ತುಂಬುವುದು) ಕಾರ್ಯಾಗಾರ ಆಯೋಜಿಸಿದೆ. <br /> <br /> ಪ್ರಾಣಿಗಳ ಮುಖ, ಜನಪ್ರಿಯ ಕಾರ್ಟೂನ್ಗಳ ಮುಖವಾಡಗಳಿಗೆ ಬಣ್ಣ ಹಚ್ಚುವ ವಿಧಾನ ಕುರಿತು ಹೇಳಿಕೊಡಲಾಗುವುದು. ಬಣ್ಣ ಹಾಗೂ ಮತ್ತಿತರ ಪರಿಕರಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು.<br /> <br /> ಸ್ಥಳ: ಆಕ್ಸ್ಫರ್ಡ್ ಬುಕ್ಸ್ಟೋರ್, ಕಾಸ್ಮಾಸ್ ಮಾಲ್, ಮೊದಲ ಮಹಡಿ, ಐಟಿಪಿಎಲ್ ರಸ್ತೆ, ಬ್ರೂಕ್ಫೀಲ್ಡ್, ಕುಂದನಹಳ್ಳಿ. ನೋಂದಣಿ ಹಾಗೂ ಮಾಹಿತಿಗೆ: 97391 05306, 4115 5223. <br /> <br /> <strong>ನೊಬೆಲ್ ಕ್ವಿಜ್</strong><br /> ಮೈಸೂರು ರಸ್ತೆ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 10ಕ್ಕೆ ಸ್ವೀಡನ್ ಇಂಡಿಯಾ ನೊಬೆಲ್ ಸ್ಮಾರಕ ಅಂತರ್ ಕಾಲೇಜು ಕ್ವಿಜ್ 2011 ನಡೆಯಲಿದೆ.<br /> <br /> ನಗರದ ಪ್ರತಿಷ್ಠಿತ ಕಾಲೇಜು ಹಾಗೂ ತಾಂತ್ರಿಕ ಕಾಲೇಜು ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಕೌನ್ ಬನೆಗಾ ಕರೋಡ್ಪತಿಯ ಸಂಶೋಧನಾ ಮುಖ್ಯಸ್ಥ ಕ್ವಿಜ್ ಮಾಸ್ಟರ್ ಅದಿತ್ಯನಾಥ್ ಮುಬಾಯಿ ನಡೆಸಿಕೊಡಲಿದ್ದಾರೆ. ವಿಜೇತರು ದೆಹಲಿಯ ಐಐಟಿಯಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದ್ದಾರೆ. <br /> <br /> ಈ ಸಂದರ್ಭದಲ್ಲಿ ಅಂಚೆಚೀಟಿ ಸಂಗ್ರಹಕಾರ ಡಾ.ಸಂಗೊರಾಂ ಅವರು ಸಂಗ್ರಹಿಸಿರುವ 80 ಪುಟಗಳ ಅಂಚೆ ಚೀಟಿಗಳ ಪ್ರದರ್ಶನವೂ ಇದೆ.<br /> <br /> <strong>ಸುರಾನಾ ಯುವೋತ್ಸವ<br /> </strong>ಸೌಥ್ಎಂಡ್ ರಸ್ತೆಯಲ್ಲಿರುವ ಸುರಾನಾ ಕಾಲೇಜು ಮಂಗಳವಾರ ಮತ್ತು ಬುಧವಾರ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಅಂತರ್ ಕಾಲೇಜು `ಯುವ ನೋವಾ~ ಉತ್ಸವವನ್ನು ಆಯೋಜಿಸಿದೆ. <br /> <br /> ಪಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ವಿಸರ್ಡ್, ರೆಸ್ಟೊರೆಂಟ್, ಆಸ್ಪತ್ರೆ, ಕೆಫೆ, ರೆಸಾರ್ಟ್, ಮನರಂಜನೆಗೆ ಸಂಬಂಧಿಸಿದಂತೆ ತಯಾರಿಸಿದ ಹೊಸ ಯೋಜನೆಗಳ ಪ್ರಸ್ತುತಿ ಹಾಗೂ ಷೆಫ್ ರೆಕ್ ಸ್ಪರ್ಧೆ ಇದೆ. <br /> <br /> ಪದವಿ ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ವ್ಯವಸ್ಥಾಪಕ (ಬೆಸ್ಟ್ ಮ್ಯಾನೇಜರ್), ಹಣಕಾಸು, ಮಾನವ ಸಂಪನ್ಮೂಲ, ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಬ್ಯುಸಿನೆಸ್ ಕ್ವಿಜ್ನಲ್ಲಿ ಪಾಲ್ಗೊಳ್ಳಬಹುದು. <br /> <br /> ಪತ್ರಿಕೋದ್ಯಮ ಹಾಗೂ ಮಾನವಿಕ ವಿಭಾಗದಲ್ಲಿ ಹೋಕಸ್ ಪೋಕಸ್, ಹೆಡ್~ನ್ ಕ್ಯಾಪ್ ಇಟ್, ನ್ಯೂಸ್ಕ್ಯಾಸ್ಟರ್, ಚರ್ಚಾ ಸ್ಪರ್ಧೆ, ಪ್ರಬಂಧ, ಮಾದರಿ ತಯಾರಿಕೆ ಸ್ಪರ್ಧೆಗಳಿರುತ್ತವೆ. <br /> <br /> ವಿಜ್ಞಾನದ ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ ಸ್ಪರ್ಧೆ ಇರುತ್ತದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ವೆಬ್ ಡಿಸೈನಿಂಗ್, ಪ್ರಾಜೆಕ್ಟ್ ಪ್ರಸ್ತುತಿ, ಚರ್ಚಾ ಸ್ಪರ್ಧೆ ಇರುತ್ತದೆ. <br /> <br /> ಸಾಹಿತ್ಯದ ವಿದ್ಯಾರ್ಥಿಗಳಿಗಾಗಿ ಭಾಷೆ ಮತ್ತು ಸಾಹಿತ್ಯ ಕ್ವಿಜ್, ಗೆಸ್ ವಾಟ್?, ಬೇಂದ್ರೆ ಗೀತೆ ಗಾಯನ, ನಿಬಂಧ ಲೇಖನ, ಸಂಸ್ಕೃತ ವೃಂದ ಗೀತ ಗಾಯನ ಇದೆ. <br /> <br /> ಮನಃಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಥಿಂಕಿಂಗ್ ಕ್ಯಾಪ್, ಫರ್ಗೆಟಿಟ್ ನಾಟ್ ಮೊದಲಾದ ಸ್ಪರ್ಧೆಗಳಿವೆ. ಜೊತೆಗೆ ಗ್ರೂಪ್ ಡ್ಯಾನ್ಸ್, ಫ್ಯಾಷನ್ ಶೋ ಸಹ ಇರುತ್ತದೆ. <br /> ಮಾಹಿತಿಗೆ: 97431 20188, 97437 04103, 88614 28056, 95352 19974. <br /> <br /> <strong>ಉದಯ ಚಿತ್ರ ಪ್ರಶಸ್ತಿ</strong><br /> ವಿವೆಲ್ ಆ್ಯಕ್ಟಿವ್ ಫೇರ್ ಉದಯ ಫಿಲ್ಮ್ಫೇರ್ ಅವಾರ್ಡ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಲಿದೆ. <br /> <br /> ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅತಿಥಿಗಳು. ಇದೇ ಸಂದರ್ಭದಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟ ಶ್ರೀನಾಥ್ ಹಾಗೂ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಗುವುದು. <br /> <br /> ಬೆಳ್ಳಿಹಬ್ಬ ವಿಶೇಷ ಪ್ರಶಸ್ತಿ ವಿಜೇತರು: ನಟ ಶಿವರಾಜ್ ಕುಮಾರ್, ರಮೇಶ್, ದೇವರಾಜ್, ನಟಿ ಸುಧಾರಾಣಿ, ತಾರಾ. ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ. ಸಂಜೆ 6.30. <br /> <br /> <strong>ಆಸ್ತಮಾ ಶಿಬಿರ</strong><br /> ಎಚ್ಬಿಆರ್ ಲೇಔಟ್ನಲ್ಲಿರುವ ಆಯುರ್ವೇದ ಕುಟೀರಂ ಭಾನುವಾರ ಉಚಿತ ಆಸ್ತಮಾ, ಅಲರ್ಜಿ, ಸಿಓಪಿಡಿ ಶಿಬಿರ ಏರ್ಪಡಿಸಿದೆ. ಡಾ. ಸೀತಾರಾಂ ಪ್ರಸಾದ್ ಅವರು ಚಿಕಿತ್ಸೆ ನೀಡಲಿದ್ದಾರೆ. ಸ್ಥಳ: ನಂ.438, ಬಿಡಿಎ ಕಾಂಪ್ಲೆಕ್ಸ್ ಎದುರು, ಎಚ್ಬಿಆರ್ ಲೇಔಟ್. ನೋಂದಣಿಗೆ: 2543 7177, 98450 02455. <br /> <br /> <strong><span id="1315572600963S" style="display: none"> </span>ಮಧುಮೇಹ ಆಹಾರ<br /> </strong>ಎಂ.ಎಸ್.ರಾಮಯ್ಯ ಆಸ್ಪತ್ರೆ ಮಧುಮೇಹ ರೋಗಿಗಳಿಗೆ ಶನಿವಾರ `ಮಧುಮೇಹ ಆಹಾರ ಪ್ರಾತ್ಯಕ್ಷಿಕೆ~ ಆಯೋಜಿಸಿದೆ. ಸ್ಥಳ: ಮೆಟ್ರೊಪೊಲೀಸ್ ಲ್ಯಾಬೊರೇಟರಿ ಎದುರು, ಎಂ.ಎಸ್.ರಾಮಯ್ಯ ಆಸ್ಪತ್ರೆ ನೆಲಮಹಡಿ, ಎಂಎಸ್ಆರ್ ನಗರ. ಮಾಹಿತಿ ಮತ್ತು ನೋಂದಣಿಗೆ: 2218 3028.<br /> <br /> <strong>ಇನ್ಫೈನೈಟ್ ಸ್ಪರ್ಧೆ</strong><br /> ಇಂಡಿಯನ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ (ಐಇಇಎಂಎ) ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಎಂಜಿನಿಯರ್ ಇನ್ಫೈನೈಟ್ 2012 ಸ್ಪರ್ಧೆ ಆಯೋಜಿಸಿದ್ದು, ಅರ್ಜಿ ಸಲ್ಲಿಸಲು ಸೆ.15 ಕೊನೆ.<br /> <br /> ಇದು ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಾಗಿದೆ. ಸ್ಪರ್ಧೆಯಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಇತರೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿಜೇತರಿಗೆ ರೂ 2 ಲಕ್ಷ ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯ ಮಾಹಿತಿ ಮತ್ತು ನೋಂದಣಿಗೆ: <a href="http://www.ei12.elecrama.com"><strong>www.ei12.elecrama.com</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>