<p>ಕವಿ ದ.ರಾ.ಬೇಂದ್ರೆ ತಮ್ಮ ಕವಿತೆಯಲ್ಲಿ ಧಾರವಾಡದ ಸಾಧನಕೇರಿಯ ಬಗ್ಗೆ ಬರೆಯುತ್ತಾ `ನಂದನದ ತುಣುಕೊಂದು ಬಿದ್ದಿದೆ, ನೋಟ ಸೇರದು ಯಾರಿಗೆ?~ ಎಂದು ಕೇಳುತ್ತಾರೆ. ಬೆಂಗಳೂರು ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲೂ ತಿಳಿ ಗುಲಾಬಿ ಹೂವನ್ನು ಹೊತ್ತು ನಿಂತಿರುವ ಮರಗಳನ್ನು ನೋಡಿದಾಗ ನನಗೆ ಕವಿತೆಯ ಈ ಸಾಲುಗಳು ನೆನಪಿಗೆ ಬಂತು. <br /> <br /> ಎಲೆಗಳನ್ನೆಲ್ಲ ಉದುರಿಸಿ ಮೈತುಂಬಾ ಹೂ ಹೊದ್ದಿರುವ ಮರಗಳು ವಸಂತ ಋತುವಿನ ಆಗಮನವನ್ನು ಸಾರುತ್ತವೆ. ಕಹಳೆಯಾಕಾರದ ತಿಳಿ ಗುಲಾಬಿ ವರ್ಣದ ಹೂವಿನ ಗೊಂಚಲಿನಿಂದ ತುಂಬಿರುವ ಈ ಮರಗಳು ಬಿಗ್ನೋನಿಯೇಸಿ ಅಥವಾ ಜಕರಂಡ ಕುಟುಂಬಕ್ಕೆ ಸೇರಿದ್ದು. ಇದರ ಹೆಸರು `ಟಬೀಬಿಯ ರೋಸಿಯ~. ಹಿಂದಿಯಲ್ಲಿ ಈ ಮರವನ್ನು `ಬಸಂತ್ ಕೀ ರಾಣಿ~ ಎಂದು ಕರೆಯುತ್ತಾರೆ. <br /> <br /> ಡಿಸೆಂಬರ್ನಿಂದ ಫೆಬ್ರುವರಿಯಲ್ಲಿ ಹೂ ಬಿಡುವ, ಬೃಹತ್ ಗಾತ್ರದಲ್ಲಿ ಬೆಳೆಯುವ ಮರಗಳು ಇತರ ದಿನಗಳಲ್ಲಿ ದಟ್ಟವಾದ ಹಸಿರು ಎಲೆಗಳಿಂದ ತುಂಬಿರುತ್ತವೆ. ಮಳೆಗಾಲದಲ್ಲಿ ಸುರಿಯುವ ನೀರಿನಿಂದ ರಕ್ಷಣೆಯನ್ನು ನೀಡುವ ಈ ಮರಗಳನ್ನು ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್ ಬಾಗ್, ಬಸವನಗುಡಿ ಮುಂತಾದ ಇತರ ಅನೇಕ ಜಾಗಗಳಲ್ಲೂ ಕಾಣಬಹುದು.</p>.<p>- <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕವಿ ದ.ರಾ.ಬೇಂದ್ರೆ ತಮ್ಮ ಕವಿತೆಯಲ್ಲಿ ಧಾರವಾಡದ ಸಾಧನಕೇರಿಯ ಬಗ್ಗೆ ಬರೆಯುತ್ತಾ `ನಂದನದ ತುಣುಕೊಂದು ಬಿದ್ದಿದೆ, ನೋಟ ಸೇರದು ಯಾರಿಗೆ?~ ಎಂದು ಕೇಳುತ್ತಾರೆ. ಬೆಂಗಳೂರು ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲೂ ತಿಳಿ ಗುಲಾಬಿ ಹೂವನ್ನು ಹೊತ್ತು ನಿಂತಿರುವ ಮರಗಳನ್ನು ನೋಡಿದಾಗ ನನಗೆ ಕವಿತೆಯ ಈ ಸಾಲುಗಳು ನೆನಪಿಗೆ ಬಂತು. <br /> <br /> ಎಲೆಗಳನ್ನೆಲ್ಲ ಉದುರಿಸಿ ಮೈತುಂಬಾ ಹೂ ಹೊದ್ದಿರುವ ಮರಗಳು ವಸಂತ ಋತುವಿನ ಆಗಮನವನ್ನು ಸಾರುತ್ತವೆ. ಕಹಳೆಯಾಕಾರದ ತಿಳಿ ಗುಲಾಬಿ ವರ್ಣದ ಹೂವಿನ ಗೊಂಚಲಿನಿಂದ ತುಂಬಿರುವ ಈ ಮರಗಳು ಬಿಗ್ನೋನಿಯೇಸಿ ಅಥವಾ ಜಕರಂಡ ಕುಟುಂಬಕ್ಕೆ ಸೇರಿದ್ದು. ಇದರ ಹೆಸರು `ಟಬೀಬಿಯ ರೋಸಿಯ~. ಹಿಂದಿಯಲ್ಲಿ ಈ ಮರವನ್ನು `ಬಸಂತ್ ಕೀ ರಾಣಿ~ ಎಂದು ಕರೆಯುತ್ತಾರೆ. <br /> <br /> ಡಿಸೆಂಬರ್ನಿಂದ ಫೆಬ್ರುವರಿಯಲ್ಲಿ ಹೂ ಬಿಡುವ, ಬೃಹತ್ ಗಾತ್ರದಲ್ಲಿ ಬೆಳೆಯುವ ಮರಗಳು ಇತರ ದಿನಗಳಲ್ಲಿ ದಟ್ಟವಾದ ಹಸಿರು ಎಲೆಗಳಿಂದ ತುಂಬಿರುತ್ತವೆ. ಮಳೆಗಾಲದಲ್ಲಿ ಸುರಿಯುವ ನೀರಿನಿಂದ ರಕ್ಷಣೆಯನ್ನು ನೀಡುವ ಈ ಮರಗಳನ್ನು ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್ ಬಾಗ್, ಬಸವನಗುಡಿ ಮುಂತಾದ ಇತರ ಅನೇಕ ಜಾಗಗಳಲ್ಲೂ ಕಾಣಬಹುದು.</p>.<p>- <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>