<p>ಅಡುಗೆಗೆ ಒಗ್ಗರಣೆ ಹೇಗೆ ಸ್ವಾದ ಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತವೆ. ಈ ಸಣ್ಣ ವಿಷಯಗಳಿಗೆ ಒತ್ತುಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿ ಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುಧೇಂದ್ರ ಅವರ ‘ಮಿಥುನ’ ಕಥಾ ಸಂಕಲನ. ಇದು ಶ್ರೀರಮಣರ ತೆಲುಗಿನ ಕಥೆಗಳಿಂದ ಪ್ರೇರೇಪಿತವಾಗಿದೆ.</p>.<p>ಯಾವುದೇ ಆತಿರೇಖಗಳಿಲ್ಲದ ತಿಳಿಯ ಅನುಭವಗಳನ್ನು ನೀಡುವ ನಾಲ್ಕೈದು ಕಥೆಗಳನ್ನು ರಂಗರೂಪಕ್ಕೆ ತರುವ ಪ್ರಯತ್ನ ಇಲ್ಲಿ ನಡೆದಿದೆ. ಒಬ್ಬ ಮನುಷ್ಯನ ಜೀವನಶೈಲಿ, ಕಟ್ಟುಕಥೆಯಂತೆ ಕಾಣುವ ಒಂದು ಘಟನೆ, ಬಾಲ್ಯದ ತೀರದ ಆಸೆ, ಬದುಕು ಕಟ್ಟುವರೀತಿ ಈ ನಾಟಕದ ಹೂರಣ. ಈ ಕಥೆಗಳ ವಿಶೇಷವೆಂದರೆ ಯಾವುದೇ ತಾರ್ಕಿಕ ಚೌಕಟ್ಟುಗಳಿಗೆ ಒಳಪಡದೆ, ಸಾಮಾನ್ಯ ವ್ಯಕ್ತಿಯ ಬದುಕಿನ ಸೂಕ್ಷ್ಮಗಳನ್ನು ಎತ್ತಿಹಿಡಿದು ಗೌರವಿಸುವ ಪ್ರಯತ್ನ.‘ನೆಮ್ಮದಿಯ ಜೀವನವು ಒಂದು ಸಾಧನೆ’ ಎಂದು ಬಿಂಬಿಸುವ ಇಚ್ಚೆ.</p>.<p><strong>ಲೇಖಕರ ಪರಿಚಯ: </strong>ವಸುಧೇಂದ್ರ ಕನ್ನಡದ ಇತ್ತೀಚಿನ ಬರಹಗಾರರಲ್ಲಿ ಪ್ರಮುಖರು. ತಮ್ಮ ಸಣ್ಣಕತೆಗಳಿಂದ ಪ್ರಸಿದ್ಧರಾದ ವಸುಧೇಂದ್ರ ಅವರು ತಮ್ಮ ಕತೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸಹೊಸ ವಿಷಯಗಳನ್ನು ಕುರಿತಾದ ಕತೆ, ಕಾದಂಬರಿ, ಪ್ರಬಂಧ, ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.</p>.<p><strong>ನಿರ್ದೇಶಕರ ವಿವರ: </strong>ಶಂಕರ್ ಗಣೇಶ್ 11 ವರುಷಗಳಿಂದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಬೆನಕ’ ತಂಡದ ನೇಪಥ್ಯ ಕೆಲಸಗಳಲ್ಲಿ ಶುರುವಾದ ರಂಗಭೂಮಿ ನಂಟು, ರಂಗಶಂಕರ, ಸಂಚಯ ಮುಂತಾದ ತಂಡಗಳ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಯಲ್ಲಿ ಪರಿಚಿತರು.</p>.<p>‘ಪೋಲಿಕಿಟ್ಟಿ’, ‘ರೋಮಿಯೋ ಲವ್ಸ್ ಅನಾರ್ಕಲಿ’ ಮತ್ತು ‘ಮಾವಿನಗುಡಿ ಕಾಲೋನಿ’ ಇವರ ನಿರ್ದೇಶನದ ನಾಟಕಗಳು. ರಂಗಭೂಮಿಯಷ್ಟೇ ಅಲ್ಲ ಕಿರುತೆರೆ, ಸಿನಿಮಾಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಹಾಗೂ ಹಲವು ಸಿನಿಮಾ ಮತ್ತು ಜಾಹೀರಾತಿನ ತೆರೆಮರೆಯ ಕೆಲಸಗಳನ್ನು ನಿರ್ವಹಿಸಿದ್ದಾರೆ.</p>.<p>**</p>.<p><strong>‘ಸಿಂಹಾಚಲಂ ಸಂಪಿಗೆ’ ನಾಟಕ ಪ್ರದರ್ಶನ: </strong>ಪ್ರಸ್ತುತಿ–ಯುವಶ್ರೀ, ರಚನೆ–ವಸುಧೇಂದ್ರ, ರಂಗರೂಪ ಮತ್ತು ನಿರ್ದೇಶನ–ಶಂಕರ ಗಣೇಶ್. ಸ್ಥಳ–ರಂಗಶಂಕರ, ಜೆ.ಪಿ.ನಗರ, ರಾತ್ರಿ 7.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಡುಗೆಗೆ ಒಗ್ಗರಣೆ ಹೇಗೆ ಸ್ವಾದ ಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತವೆ. ಈ ಸಣ್ಣ ವಿಷಯಗಳಿಗೆ ಒತ್ತುಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿ ಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುಧೇಂದ್ರ ಅವರ ‘ಮಿಥುನ’ ಕಥಾ ಸಂಕಲನ. ಇದು ಶ್ರೀರಮಣರ ತೆಲುಗಿನ ಕಥೆಗಳಿಂದ ಪ್ರೇರೇಪಿತವಾಗಿದೆ.</p>.<p>ಯಾವುದೇ ಆತಿರೇಖಗಳಿಲ್ಲದ ತಿಳಿಯ ಅನುಭವಗಳನ್ನು ನೀಡುವ ನಾಲ್ಕೈದು ಕಥೆಗಳನ್ನು ರಂಗರೂಪಕ್ಕೆ ತರುವ ಪ್ರಯತ್ನ ಇಲ್ಲಿ ನಡೆದಿದೆ. ಒಬ್ಬ ಮನುಷ್ಯನ ಜೀವನಶೈಲಿ, ಕಟ್ಟುಕಥೆಯಂತೆ ಕಾಣುವ ಒಂದು ಘಟನೆ, ಬಾಲ್ಯದ ತೀರದ ಆಸೆ, ಬದುಕು ಕಟ್ಟುವರೀತಿ ಈ ನಾಟಕದ ಹೂರಣ. ಈ ಕಥೆಗಳ ವಿಶೇಷವೆಂದರೆ ಯಾವುದೇ ತಾರ್ಕಿಕ ಚೌಕಟ್ಟುಗಳಿಗೆ ಒಳಪಡದೆ, ಸಾಮಾನ್ಯ ವ್ಯಕ್ತಿಯ ಬದುಕಿನ ಸೂಕ್ಷ್ಮಗಳನ್ನು ಎತ್ತಿಹಿಡಿದು ಗೌರವಿಸುವ ಪ್ರಯತ್ನ.‘ನೆಮ್ಮದಿಯ ಜೀವನವು ಒಂದು ಸಾಧನೆ’ ಎಂದು ಬಿಂಬಿಸುವ ಇಚ್ಚೆ.</p>.<p><strong>ಲೇಖಕರ ಪರಿಚಯ: </strong>ವಸುಧೇಂದ್ರ ಕನ್ನಡದ ಇತ್ತೀಚಿನ ಬರಹಗಾರರಲ್ಲಿ ಪ್ರಮುಖರು. ತಮ್ಮ ಸಣ್ಣಕತೆಗಳಿಂದ ಪ್ರಸಿದ್ಧರಾದ ವಸುಧೇಂದ್ರ ಅವರು ತಮ್ಮ ಕತೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸಹೊಸ ವಿಷಯಗಳನ್ನು ಕುರಿತಾದ ಕತೆ, ಕಾದಂಬರಿ, ಪ್ರಬಂಧ, ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.</p>.<p><strong>ನಿರ್ದೇಶಕರ ವಿವರ: </strong>ಶಂಕರ್ ಗಣೇಶ್ 11 ವರುಷಗಳಿಂದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಬೆನಕ’ ತಂಡದ ನೇಪಥ್ಯ ಕೆಲಸಗಳಲ್ಲಿ ಶುರುವಾದ ರಂಗಭೂಮಿ ನಂಟು, ರಂಗಶಂಕರ, ಸಂಚಯ ಮುಂತಾದ ತಂಡಗಳ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಯಲ್ಲಿ ಪರಿಚಿತರು.</p>.<p>‘ಪೋಲಿಕಿಟ್ಟಿ’, ‘ರೋಮಿಯೋ ಲವ್ಸ್ ಅನಾರ್ಕಲಿ’ ಮತ್ತು ‘ಮಾವಿನಗುಡಿ ಕಾಲೋನಿ’ ಇವರ ನಿರ್ದೇಶನದ ನಾಟಕಗಳು. ರಂಗಭೂಮಿಯಷ್ಟೇ ಅಲ್ಲ ಕಿರುತೆರೆ, ಸಿನಿಮಾಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಹಾಗೂ ಹಲವು ಸಿನಿಮಾ ಮತ್ತು ಜಾಹೀರಾತಿನ ತೆರೆಮರೆಯ ಕೆಲಸಗಳನ್ನು ನಿರ್ವಹಿಸಿದ್ದಾರೆ.</p>.<p>**</p>.<p><strong>‘ಸಿಂಹಾಚಲಂ ಸಂಪಿಗೆ’ ನಾಟಕ ಪ್ರದರ್ಶನ: </strong>ಪ್ರಸ್ತುತಿ–ಯುವಶ್ರೀ, ರಚನೆ–ವಸುಧೇಂದ್ರ, ರಂಗರೂಪ ಮತ್ತು ನಿರ್ದೇಶನ–ಶಂಕರ ಗಣೇಶ್. ಸ್ಥಳ–ರಂಗಶಂಕರ, ಜೆ.ಪಿ.ನಗರ, ರಾತ್ರಿ 7.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>