<p>ಖ್ಯಾತ ಕಲಾವಿದರಾದ ಅರವಿಂದ ಚೌಧರಿ, ಕಮಲೇಶ್ ದಾಸ್, ರಾಜೇಶ್ವರ ನ್ಯಾಲಪಲ್ಲಿ ಮತ್ತು ಇಂದೂ ಕಾಳೆ ಅವರ ಅಪರೂಪದ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.<br /> <br /> ಈ ನಾಲ್ವರೂ ಕಲಾವಿದರು ತಮ್ಮ ಕುಂಚದಲ್ಲಿ ತಮ್ಮ ಮನೋ ಸಹಜ ಅಭಿವ್ಯಕ್ತಿಗೆ ಅನುಗುಣವಾಗಿ ಹೆಣ್ಣನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಇಂದೂ ಕಾಳೆ ಅವರು ಚಿತ್ರಿಸಿರುವ ಜನಪದ ಶೈಲಿಯ ಹೆಣ್ಣು ಈ ಪ್ರದರ್ಶನದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. <br /> <br /> ಕಮಲೇಶ್ ದಾಸ್ ಅವರ ಮಾಧವನ ಆಗಮನಕ್ಕಾಗಿ ಕಾದಿರುವ ಮೀರಾ ತಂಬೂರಿ ಮೀಟುತ್ತಿರುವ ಚಿತ್ರಕಲಾಕೃತಿ ಅನನ್ಯವಾಗಿದೆ. ಗಾಢವಾದ ಕೃಷ್ಣನ ನೆನಪಿನಲ್ಲಿ ಮೀರಾ ಅರೆ ಮುಚ್ಚಿದ ಕಣ್ಣುಗಳೊಂದಿಗೆ, ತನ್ನ ನೀಳ ಬೆರಳುಗಳಿಂದ ತಂತಿ ಮೀಟುವಾಗ, ಆಕೆಯ ಮುಖದ ಮೇಲೆ ಬಿಂಬಿತಗೊಂಡಿರುವ ಮನೋತುಮುಲಗಳು ಆಪ್ತವೆನಿಸುತ್ತದೆ. <br /> <br /> ರಾಜೇಶ್ವರ್ ನ್ಯಾಲಪಲ್ಲಿ ಅವರ ಚಿತ್ತಾರದಲ್ಲಿ ಆಧುನಿಕ ಹೆಣ್ಣಿನ ಮನೋಕಾಮನೆಗಳು ನಿಚ್ಚಳವಾಗಿ ಅಭಿವ್ಯಕ್ತಿಗೊಂಡಿದೆ. ಹೆಣ್ಣಿನ ಮನಸ್ಸಿನಲ್ಲಿ ಅಡಗಿರುವ ಪ್ರೀತಿ, ಪ್ರೇಮ, ಮೋಹ ಇವೆಲ್ಲವೂ ಇವರ ಚಿತ್ರ ರಚನೆಗೆ ಪ್ರೇರಕವಾಗಿದೆ. ಸ್ಥಳ: ರಿನೈಸೆನ್ಸ್ ಗ್ಯಾಲರಿ, ಕನ್ನಿಂಗ್ಹ್ಯಾಮ್ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7. ಪ್ರದರ್ಶನ ಶುಕ್ರವಾರ ಮುಕ್ತಾಯ. <br /> <br /> <strong>ಕಲಾ ದರ್ಶನ</strong><br /> ಖ್ಯಾತ ಕಲಾವಿದರಾದ ಕೈಲಾಸ್ ಅನ್ಯಾಲ್, ವಿಜಯಾ ರಾಜ್ ಬೋದಾನ್ಕರ್, ಸಂಗೀತ ಗದಾ ಮತ್ತು ಕಿಶೋರ್ ನಾದವ್ದೇಖರ್ ಅವರ ಅಪರೂಪದ ಕಲಾಕೃತಿಗಳು ಸೆ.15ರ ವರೆಗೆ ಪ್ರದರ್ಶನಗೊಳ್ಳಲಿವೆ. ಸ್ಥಳ: ಚಿತ್ರಕಲಾ ಪರಿಷತ್, ಬೆಳಿಗ್ಗೆ 10.30ರಿಂದ 7.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖ್ಯಾತ ಕಲಾವಿದರಾದ ಅರವಿಂದ ಚೌಧರಿ, ಕಮಲೇಶ್ ದಾಸ್, ರಾಜೇಶ್ವರ ನ್ಯಾಲಪಲ್ಲಿ ಮತ್ತು ಇಂದೂ ಕಾಳೆ ಅವರ ಅಪರೂಪದ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.<br /> <br /> ಈ ನಾಲ್ವರೂ ಕಲಾವಿದರು ತಮ್ಮ ಕುಂಚದಲ್ಲಿ ತಮ್ಮ ಮನೋ ಸಹಜ ಅಭಿವ್ಯಕ್ತಿಗೆ ಅನುಗುಣವಾಗಿ ಹೆಣ್ಣನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಇಂದೂ ಕಾಳೆ ಅವರು ಚಿತ್ರಿಸಿರುವ ಜನಪದ ಶೈಲಿಯ ಹೆಣ್ಣು ಈ ಪ್ರದರ್ಶನದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. <br /> <br /> ಕಮಲೇಶ್ ದಾಸ್ ಅವರ ಮಾಧವನ ಆಗಮನಕ್ಕಾಗಿ ಕಾದಿರುವ ಮೀರಾ ತಂಬೂರಿ ಮೀಟುತ್ತಿರುವ ಚಿತ್ರಕಲಾಕೃತಿ ಅನನ್ಯವಾಗಿದೆ. ಗಾಢವಾದ ಕೃಷ್ಣನ ನೆನಪಿನಲ್ಲಿ ಮೀರಾ ಅರೆ ಮುಚ್ಚಿದ ಕಣ್ಣುಗಳೊಂದಿಗೆ, ತನ್ನ ನೀಳ ಬೆರಳುಗಳಿಂದ ತಂತಿ ಮೀಟುವಾಗ, ಆಕೆಯ ಮುಖದ ಮೇಲೆ ಬಿಂಬಿತಗೊಂಡಿರುವ ಮನೋತುಮುಲಗಳು ಆಪ್ತವೆನಿಸುತ್ತದೆ. <br /> <br /> ರಾಜೇಶ್ವರ್ ನ್ಯಾಲಪಲ್ಲಿ ಅವರ ಚಿತ್ತಾರದಲ್ಲಿ ಆಧುನಿಕ ಹೆಣ್ಣಿನ ಮನೋಕಾಮನೆಗಳು ನಿಚ್ಚಳವಾಗಿ ಅಭಿವ್ಯಕ್ತಿಗೊಂಡಿದೆ. ಹೆಣ್ಣಿನ ಮನಸ್ಸಿನಲ್ಲಿ ಅಡಗಿರುವ ಪ್ರೀತಿ, ಪ್ರೇಮ, ಮೋಹ ಇವೆಲ್ಲವೂ ಇವರ ಚಿತ್ರ ರಚನೆಗೆ ಪ್ರೇರಕವಾಗಿದೆ. ಸ್ಥಳ: ರಿನೈಸೆನ್ಸ್ ಗ್ಯಾಲರಿ, ಕನ್ನಿಂಗ್ಹ್ಯಾಮ್ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7. ಪ್ರದರ್ಶನ ಶುಕ್ರವಾರ ಮುಕ್ತಾಯ. <br /> <br /> <strong>ಕಲಾ ದರ್ಶನ</strong><br /> ಖ್ಯಾತ ಕಲಾವಿದರಾದ ಕೈಲಾಸ್ ಅನ್ಯಾಲ್, ವಿಜಯಾ ರಾಜ್ ಬೋದಾನ್ಕರ್, ಸಂಗೀತ ಗದಾ ಮತ್ತು ಕಿಶೋರ್ ನಾದವ್ದೇಖರ್ ಅವರ ಅಪರೂಪದ ಕಲಾಕೃತಿಗಳು ಸೆ.15ರ ವರೆಗೆ ಪ್ರದರ್ಶನಗೊಳ್ಳಲಿವೆ. ಸ್ಥಳ: ಚಿತ್ರಕಲಾ ಪರಿಷತ್, ಬೆಳಿಗ್ಗೆ 10.30ರಿಂದ 7.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>