ಎಚ್.ಡಿ.ಕೋಟೆ: ತಾಲ್ಲೂಕಿನ ಸವ್ವೆ ಬಳಿಯ ತೋಟದ ಮನೆಯಲ್ಲಿದ್ದ ಲಾರಿಯಲ್ಲಿ ತುಂಬಿದ್ದ ಎಂಸ್ಯಾಂಡ್ನಲ್ಲಿ ಮುಚ್ಚಿಟ್ಟಿದ್ದ ₹ 50 ಲಕ್ಷ ನಗದನ್ನು ಸಹಾಯಕ ಚುನಾವಣಾ ಅಧಿಕಾರಿ ಕುಮುದಾ ಶರತ್ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡರು.
‘ಚುನಾವಣೆಗೆ ಹಂಚಲು ಹಣವನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ತಾಲ್ಲೂಕು ಖಜಾನೆಗೆ ಒಪ್ಪಿಸಲಾಗಿದೆ’ ಎಂದು ಅವರು ತಿಳಿಸಿದರು. ತಹಶೀಲ್ದಾರ್ ಪಿ.ಎನ್.ಮಹೇಶ್ ಇದ್ದರು. ಸ್ಥಳದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ನೆರೆದಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.