ಮರುಕಳಿಸಿದ 2015 ಘಟನೆ: ಗಡಿಕೇಶ್ವಾರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ 2015ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಇದೇ ರೀತಿ ಭೂಮಿಯಿಂದ ಸದ್ದು ಕೇಳಿಬಂದಿತ್ತು. ಆಗ ನೈಸರ್ಗಿಕ ವಿಪತ್ತುಗಳ ನಿರ್ವಹಣೆ ಕೇಂದ್ರದ ಭೂಕಂಪ ತಜ್ಞರಾದ ಡಾ.ಜಗದೀಶ, ಡಾ.ರಮೇಶ ದಿಕ್ಪಾಲ್ ನೇತೃತ್ವದಲ್ಲಿ ಗಡಿಕೇಶ್ವಾರ ಗ್ರಾಮದಲ್ಲಿ (ಸಿಸ್ಮಿಕ್ ಸೆಂಟರ್) ತಾತ್ಕಾಲಿಕ ಭೂಕಂಪ ಮಾಪನ ಕೇಂದ್ರ ತೆರೆದು ಸಿಸ್ಮೊಗ್ರಾಫ್ ಅಳವಡಿಸಲಾಗಿತ್ತು. ಕಳೆದ ವರ್ಷ ತಾಲ್ಲೂಕಿನ ಐಪಿ ಹೊಸಳ್ಳಿಯಲ್ಲಿ ಇಂತಹುದೇ ಸದ್ದು ಜನರಲ್ಲಿ ಭೀತಿ ಸೃಷ್ಟಿಸಿತ್ತು.