ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ. ಕೆ. ಶಶಿಕಲಾ ನಟರಾಜನ್ ಅವರಿಗೆ ಐದು ದಿನಗಳ ಪೆರೋಲ್ ರಜೆ ನೀಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿ.ಕೆ.ಶಶಿಕಲಾ ಅವರ ಪತಿ ನಟರಾಜನ್ ಅನಾರೋಗ್ಯ ಪೀಡಿತರಾಗಿದ್ದು ಅವರನ್ನು ನೋಡಲು ಶಶಿಕಲಾಗೆ ಪೆರೋಲ್ ನೀಡಲಾಗಿದೆ. ತಮಿಳುನಾಡು ಸರ್ಕಾರದ ಶಿಪಾರಸ್ಸಿನ ಮೇರೆಗೆ ಪೆರೋಲ್ ನೀಡಲಾಗಿದೆ.
ಶುಕ್ರವಾರ ಚೆನ್ನೈಗೆ ತೆರಳಿ ಶಶಿಕಲಾ ಪತಿಯನ್ನು ಭೇಟಿ ಮಾಡಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟರಾಜನ್ ಕಿಡ್ನಿ ಹಾಗೂ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಪತಿಯ ಭೇಟಿಯನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಿರುವಂತೆ ನ್ಯಾಯಾಲಯ ಸೂಚಿಸಿದೆ. ಚೆನ್ನೈ ಪೊಲೀಸರು ಶಶಿಕಲಾ ಅವರ ಮೇಲೆ ನಿಗಾವಹಿಸಲಿದ್ದಾರೆ.