‘ಓಬವ್ವ ಅವರನ್ನು ಹೈದರಾಲಿ (ಟಿಪ್ಪು ತಂದೆ) ಅವರ ಸೈನ್ಯ ಮೋಸದಿಂದ ಹತ್ಯೆ ಮಾಡಿತ್ತು. ಆ ಸೈನ್ಯದಲ್ಲಿ ಟಿಪ್ಪು ಸಹ ಇದ್ದು, ಓಬವ್ವ ವಿರುದ್ಧ ಹೋರಾಡಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಟಿಪ್ಪು ಜಯಂತಿ ಮಾಡಿದರೆ ಓಬವ್ವ ಅವರ ಶೌರ್ಯಕ್ಕೆ ಅಪಮಾನ ಮಾಡಿದಂತಾಗುತ್ತದೆ. ಹೀಗಾಗಿ ಜಯಂತಿ ನಡೆಸಬಾರದು’ ಎಂದು ವೇದಿಕೆಯ ಅಧ್ಯಕ್ಷ ಡಾ.ಜೀವರಾಜ್ ಆಗ್ರಹಿಸಿದರು.