ಹೊಲದ ನಡುವೆ ಕರಡಿಯ ಮರಿ ಇರುವುದನ್ನು ಗ್ರಾಮಸ್ಥರು ಶನಿವಾರ ನೋಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಲಯ ಅರಣ್ಯ ಅಧಿಕಾರಿ ದಿನೇಶ್ ಗೌಡ ಅವರು ಈ ಬಗ್ಗೆ ಬನ್ನೇರುಘಟ್ಟ ಕರಡಿಧಾಮಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿ ಕರಡಿ ಮರಿಯನ್ನು ವಶಕ್ಕೆ ಪಡೆದ ಕರಡಿಧಾಮದ ಅಧಿಕಾರಿಗಳು ಅದಕ್ಕೆ ಚಿಕಿತ್ಸೆ ನೀಡಿದರು.