ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಮುಖಾಮುಖಿಯಾದ ಅವರು, ಬಿಜೆಪಿ ಆಮಿಷ ಒಡ್ಡಿದ್ದು ಸುಳ್ಳೋ, ನಿಜವೋ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ‘ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹೇಳಿಕೆಗಳು ಹಾಗೂ ಐ.ಟಿ. ಅಧಿಕಾರಿಗಳ ಸ್ಪಷ್ಟನೆಯನ್ನೂ ಗಮನಿಸಿದ್ದೇನೆ. ಆದರೆ ಸದ್ಯ ನಾನೇನೂ ಹೇಳಲಾರೆ. ಆದರೆ ನನ್ನ ರಾಜಕೀಯ ನಿಲುವಿನಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ’ ಎಂದರು.