ಬಿಳಿ ಮತ್ತು ಕೆಂಪು ಗುಲಾಬಿಗಳಿಂದ ರೂಪಿಸಿದ್ದ ದೆಹಲಿಯ ಬಹಾಯಿ ಮಂದಿರದ ಪ್ರತಿಕೃತಿ ಹಾಗೂ ತಾಜ್ಮಹಲ್ ಪ್ರತಿಕೃತಿ ಮಕ್ಕಳ ಆಕರ್ಷಣೆಯ ಕೇಂದ್ರವಾಗಿದ್ದವು. ಉದ್ಯಾನದಲ್ಲಿ ಅನಾವರಣಗೊಂಡಿದ್ದ ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ಕುತೂಹಲದಿಂದ ವೀಕ್ಷಿಸಿದ ಚಿಣ್ಣರು, ವಿವಿಧ ಭಾವ ಭಂಗಿಗಳಲ್ಲಿ ಛಾಯಾಚಿತ್ರ ತೆಗೆಸಿಕೊಂಡರು. ಬುಗುರಿ, ಗೋಲಿ, ಲಗೋರಿ, ಪಗಡೆ, ಹಗ್ಗದಾಟ, ಅಳಗುಳಿ ಮನೆ, ಚಾಟರಿ ಬಿಲ್ಲು ಆಟವಾಡಿ ದಣಿದ ಮಕ್ಕಳು ಎಳನೀರು ಕುಡಿದು ತಣಿದರು.