ಉಡುಪಿ: ಪ್ರಸಕ್ತ ಸಾಲಿನ ಅಮ್ಮ ಪ್ರಶಸ್ತಿಯನ್ನು ಕಲಬುರ್ಗಿಯದ ಮಾತೋಶ್ರೀ ಮಹದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಪ್ರಕಟಿಸಿದ್ದು, ಉಡುಪಿ ಅಂಕಣಕಾರ ರಾಜಾರಾಂ ತಲ್ಲೂರು ಅವರ ಕೃತಿ ‘ನುಣ್ಣನ್ನ ಬೆಟ್ಟ’ ಸೇರಿದಂತೆ 5 ಕೃತಿಗಳಿಗೆ ಈ ಪ್ರಶಸ್ತಿ ಸಂದಿದೆ.
ಈ ಬಾರಿ ಎಂ. ಆರ್. ಕಮಲ ಅವರ ಕವನ ಸಂಕಲನ ‘ಮಾರಿಬಿಡಿ’, ರೇಖಾ ಕಾಖಂಡಕಿ ಅವರ ಕಾದಂಬರಿ ‘ವೈವಸ್ವತ’, ಎಚ್.ಆರ್ ಸುಜಾತ ಅವರ ಕವನ ಸಂಕಲನ ‘ನೀಲಿ ಮೂಗಿನ ನತ್ತು’ ಮತ್ತು ಗಿರೀಶ್ ಜಕಾಪುರೆ ಅವರ ‘ನಾಝಿ ನರಮೇಧ’ ಪ್ರಶಸ್ತಿ ವಿಜೇತ ಕೃತಿಗಳಾಗಿವೆ.
18ನೇ ವರ್ಷದಲ್ಲಿ ಕೊಡಲಾಗುತ್ತಿರುವ ಈ ವಾರ್ಷಿಕ ಪ್ರಶಸ್ತಿಯು ₹ 5,000 ನಗದು, ಇದೇ ನವೆಂಬರ್ 26ರಂದು ಸೇಡಂನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅವಧಿ ಅಂತರ್ಜಾಲ ತಾಣದಲ್ಲಿ ರಾಜಾರಾಂ ತಲ್ಲೂರು ಅವರ ಬರೆದ ನುಣ್ಣನ್ನಬೆಟ್ಟ ಅಂಕಣಗಳನ್ನು ಪ್ರೊ.ಡಿ.ಜಿ. ಮುದ್ರಣ ಮೂಲ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಪತ್ರಕರ್ತ ಪಿ. ಸಾಯಿನಾಥ್ ಈ ಪುಸ್ತಕವನ್ನು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಿಸಿದರು.
ಅಮ್ಮ ಪ್ರಶಸ್ತಿಯನ್ನು 17 ವರ್ಷಗಳಿಂದ ನೀಡಲಾಗುತ್ತಿದ್ದು, ಎಚ್.ಎಸ್ ಮುಕ್ತಾಯಕ್ಕ, ವಸುಧೇಂದ್ರ, ಜಯಶ್ರೀ ಕಾಸರವಳ್ಳಿ, ಸರಜೂ ಕಾಟ್ಕರ್, ರೂಪಾ ಹಾಸನ್, ಸಿ.ಜಿ ಮಂಜುಳಾ, ಜ್ಯೋತಿ ಗುರುಪ್ರಸಾದ್, ಪಿ. ಉಷಾ ರೈ ಮತ್ತಿತರ ಲೇಖಕರು ಪಡೆದುಕೊಂಡಿದ್ದಾರೆ.