ಹಸ್ತಾಕ್ಷರ ಅಭಿಯಾನ: ‘ರಾಜ್ಯದಲ್ಲಿನ ಪ್ರತಿ ಮನೆ ತಲುಪುವ ಅಭಯಾಕ್ಷರ ಅಭಿಯಾನದಲ್ಲಿ ಸುಮಾರು 5 ಕೋಟಿ ಗೂ ಅಧಿಕ ಮಂದಿ ಗೋ ಸಂರಕ್ಷಣೆ ಪರವಾಗಿ ಹಸ್ತಾಕ್ಷರ ನೀಡುವ ನಿರೀಕ್ಷೆಯಿದೆ. ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸುವ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 5 ಲಕ್ಷ ಮಂದಿ ಈಗಾಗಲೇ ಸಹಿ ಮಾಡಿದ್ದಾರೆ. ಎಲ್ಲವನ್ನು ಮುಂದಿನ ಮಾರ್ಚ್ ತಿಂಗಳಾಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ’ ಎಂದರು.