ಪಟ್ಟಣದಲ್ಲಿ ಯಲ್ಲಮ್ಮ ಬಿಸುಕಲ್ಲವಡ್ಡರ ಎಂಬ ಯುವತಿಗೆ ಭೂತ ಚೇಷ್ಟೆ ಆಗಿದೆ ಎಂದು ತಿಳಿದ ಸಂಬಂಧಿಕರು, ಆಕೆಯ ಕೈಗಳನ್ನು ಕಟ್ಟಿ ಮಾಂತ್ರಿಕ ಬಾಬಾ ಅವರ ಬಳಿ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದರು. ವಿಷಯ ತಿಳಿದ, ಸ್ಥಳೀಯ ಪಿಎಸ್ಐ ಸುರೇಶ ಬೆಂಡಿಗುಂಬಳ ನೇತೃತ್ವದ ತಂಡ ಯುವತಿಯನ್ನು ರಕ್ಷಿಸಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತು.