ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಮಹತ್ವ ತಿಳಿಸಿದರು

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಾನು ಓದಿದ್ದು ಬೆಂಗಳೂರಿನ ಭಾರತೀಯ ಸಂಸ್ಕೃತಿ ವಿದ್ಯಾಪೀಠ ದಲ್ಲಿ. ಅಲ್ಲಿ ಆಗಿದ್ದ ಕನ್ನಡ ಮೇಷ್ಟ್ರಿ ಗಾಂಧೀವಾದಿಗಳು. ಅವರ ಹೆಸರು ಗೋಪಾಲ್ ಬಿಳಿಯ ಪೈಜಾಮ ಜುಬ್ಬಾ ಧರಿಸುತ್ತಿದ್ದರು. ಬಹಳ ಆಸಕ್ತಿಯಿಂದ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದರು. ಅವರು ಕಲಿಸಿದ ಕನ್ನಡ ವ್ಯಾಕರಣ ಇಂದಿಗೂ ನೆನಪಿದೆ.

ಕನ್ನಡ ಕಲಿಯದಿದ್ದರೆ ಬೆತ್ತದ ರುಚಿ ತೋರಿಸುತ್ತಿದ್ದರು. ಒಂದೊಂದು ತಪ್ಪಿಗೆ ಕೈ ಗಂಟಿಗೆ ಬೆತ್ತದಿಂದ ಬಾರಿಸುತ್ತಿದ್ದರು. ಅವರು ಕಲಿಸಿದ್ದನ್ನು ಸರಿಯಾಗಿ ಹೇಳಿದರೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಅಂತಹ ಗುರುವನ್ನು ಮರೆಯಲು ಸಾಧ್ಯವೇ ಇಲ್ಲ.
–ಪಾರಂಪಳ್ಳಿ ವಾಸಂತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT