<p><strong>ಬೆಳಗಾವಿ:</strong> ನಗರದ ಹಳೆಯ ಪುಣೆ– ಬೆಂಗಳೂರು ರಸ್ತೆಯ ದಂಡುಮಂಡಳಿ ಪ್ರದೇಶದ ಸಗಟು ತರಕಾರಿ ಮಾರುಕಟ್ಟೆ ಮುಂಭಾಗದಿಂದ ನಗರದೊಳಗೆ ಹೋಗುವ ರಸ್ತೆಯ ಮೂಲೆಯಲ್ಲಿ ಗುಂಡಿಯೊಂದು ಬಾಯ್ತೆರೆದುಕೊಂಡಿದೆ. ಇದು ಮುಖ್ಯ ವೃತ್ತದಲ್ಲಿರುವುದರಿಂದ ನಿತ್ಯ ಸಂಚಾರಕ್ಕೂ ಅಡಚಣೆಯಾಗಿದೆ, ಅಪಘಾತಗಳಿಗೂ ಕಾರಣವಾಗಿದೆ.</p>.<p>ಪೆಟ್ರೋಲ್ ಪಂಪ್, ಟೆಂಪೊ ನಿಲ್ದಾಣ, ತರಕಾರಿ ಮಾರುಕಟ್ಟೆ, ವಾಹನಗಳ ಬಿಡಿಭಾಗಗಳ ಅಂಗಡಿಗಳು, ಗೂಡಂಗಡಿಗಳು, ಪಾಲಿಕೆ ಮಾಲೀಕತ್ವದ ಶಾಪಿಂಗ್ ಕಟ್ಟಡಗಳ ಮಧ್ಯದಲ್ಲಿರುವ ಈ ಗುಂಡಿ ಮುಚ್ಚುವಂತೆ ಅನೇಕ ಸಲ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.</p>.<p>ನಗರದಲ್ಲಿ ಅತಿ ಹೆಚ್ಚು ಜನ, ವಾಹನಗಳ ದಟ್ಟಣೆ ಹೊಂದಿರುವ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸಲು ಜಿಲ್ಲಾಡಳಿತವು ಅನೇಕ ಕ್ರಮಗಳನ್ನು ಕೈಕೊಂಡಿದೆ.</p>.<p>ರಸ್ತೆ ವಿಸ್ತರಣೆ, ರಸ್ತೆ ವಿಭಜಕ ನಿರ್ಮಾಣ, ಚರಂಡಿ ಮೇಲೆ ಸಿಮೆಂಟ್ ಕಾಂಕ್ರೀಟ್ ನಿರ್ಮಿಸುವುದು ಎಲ್ಲ ಕೆಲಸ ಎಲ್ಲವನ್ನೂ ಮಾಡಲಾಗಿದೆ. ಪೊಲೀಸರು ಆಗಾಗ, ಗುಂಡಿಯ ಸುತ್ತಲೂ ಬ್ಯಾರಿಕೇಡ್ ಹಾಕಿ ಅಪಘಾತವಾಗದಂತೆ ನೋಡಿ ಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಈ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಐದಡಿ ಆಳದ ಈ ಗುಂಡಿಯಲ್ಲಿ ಈ ವೃತ್ತ ತಿರು ಗುವಾಗ ಅನೇಕ ವಾಹನ ಬಿದ್ದಿವೆ. ಅನೇಕರು ಕೈಕಾಲು ಮುರಿದು ಕೊಂಡಿದ್ದಾರೆ.</p>.<p>‘ಈ ಭಾಗದ ನಿವಾಸಿಗಳು, ವ್ಯಾಪಾ ರಸ್ಥರು, ಅಂಗಡಿಯವರು ಅನೇಕ ಸಲ ಶಾಸಕರು, ಪಾಲಿಕೆ ಅಧಿಕಾರಿಗಳಿಗೆ ಖುದ್ದಾಗಿ ಭೇಟಿಯಾಗಿ, ಗಟಾರ ಬಾಯಿ ಮುಚ್ಚಲು ಮನವಿ ಮಾಡಿದರೂ ಯಾರೂ ಕಾಳಜಿ ವಹಿಸಿಲ್ಲ’ ಎಂದು ವಾಹನಗಳ ಬಿಡಿಭಾಗಗಳ ಮಾರಾಟಗಾರ ಕುತುಬುದ್ದೀನ್ ಶೇಖ್ ವಿಷಾದ ವ್ಯಕ್ತಪಡಿಸಿದರು.</p>.<p>ವರ್ಷದ ಹಿಂದೆ, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಇಲ್ಲಿ ಸೇತುವೆ ನಿರ್ಮಿಸಲಾಗಿದೆ. ಆಗ ಈ ಸೇತುವೆ ಜತೆಗೇ ಈ ತೆರೆದ ಗಟಾರವನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು, ಗುತ್ತಿಗೆದಾರರು ಭರವಸೆ ನೀಡಿದ್ದರು. ನಂತರ ಯಾರೂ ಸ್ಪಂದಿಸಲಿಲ್ಲ ಎಂದು ಟೈಯರ್ ಮಾರಾಟಗಾರರ ಅಮೀರ್ ಪಠಾಣ ಹೇಳಿದರು.</p>.<p>ತರಕಾರಿ ಮಾರುಕಟ್ಟೆಗೆ ಬರುವ ರೈತರು, ಟೆಂಪೊ ಮಾಲೀಕರು, ಚಾಲಕರು ಸೇರಿ ವಿವಿಧ ಅಂಗಡಿಗಳಿಂದ ಇಲ್ಲಿ ಚಹಾ ಕುಡಿಯಲು ಬರುತ್ತಾರೆ. ಗುಂಡಿಯಿಂದ ದುರ್ವಾಸನೆ ಬರುತ್ತದೆ. ಮಾಲಿನ್ಯ ಉಂಟಾಗುತ್ತಿದೆ ಎಂದು ರೈತ ಜಗದೀಶ ಪಾಟೀಲ ತಿಳಿಸಿದರು.</p>.<p>*</p>.<p>ಕೇವಲ ₹1 ಸಾವಿರದಲ್ಲಿ ಮುಚ್ಚಬಹುದಾಗಿರುವ ಈ ಗುಂಡಿ ಹಾಗೇ ಬಿಟ್ಟಿರುವುದ ರಿಂದ ನಿತ್ಯ ಅಪಘಾತ ಸಂಭವಿಸುತ್ತಿವೆ. ಬೇಗ ಗುಂಡಿ ಮುಚ್ಚಿ ಅಪಘಾತ ತಡೆಯಬೇಕು.</p>.<p><em><strong>–ಅಮೀರ್ ಪಠಾಣ, ವ್ಯಾಪಾರಸ್ಥರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ನಗರದ ಹಳೆಯ ಪುಣೆ– ಬೆಂಗಳೂರು ರಸ್ತೆಯ ದಂಡುಮಂಡಳಿ ಪ್ರದೇಶದ ಸಗಟು ತರಕಾರಿ ಮಾರುಕಟ್ಟೆ ಮುಂಭಾಗದಿಂದ ನಗರದೊಳಗೆ ಹೋಗುವ ರಸ್ತೆಯ ಮೂಲೆಯಲ್ಲಿ ಗುಂಡಿಯೊಂದು ಬಾಯ್ತೆರೆದುಕೊಂಡಿದೆ. ಇದು ಮುಖ್ಯ ವೃತ್ತದಲ್ಲಿರುವುದರಿಂದ ನಿತ್ಯ ಸಂಚಾರಕ್ಕೂ ಅಡಚಣೆಯಾಗಿದೆ, ಅಪಘಾತಗಳಿಗೂ ಕಾರಣವಾಗಿದೆ.</p>.<p>ಪೆಟ್ರೋಲ್ ಪಂಪ್, ಟೆಂಪೊ ನಿಲ್ದಾಣ, ತರಕಾರಿ ಮಾರುಕಟ್ಟೆ, ವಾಹನಗಳ ಬಿಡಿಭಾಗಗಳ ಅಂಗಡಿಗಳು, ಗೂಡಂಗಡಿಗಳು, ಪಾಲಿಕೆ ಮಾಲೀಕತ್ವದ ಶಾಪಿಂಗ್ ಕಟ್ಟಡಗಳ ಮಧ್ಯದಲ್ಲಿರುವ ಈ ಗುಂಡಿ ಮುಚ್ಚುವಂತೆ ಅನೇಕ ಸಲ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.</p>.<p>ನಗರದಲ್ಲಿ ಅತಿ ಹೆಚ್ಚು ಜನ, ವಾಹನಗಳ ದಟ್ಟಣೆ ಹೊಂದಿರುವ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸಲು ಜಿಲ್ಲಾಡಳಿತವು ಅನೇಕ ಕ್ರಮಗಳನ್ನು ಕೈಕೊಂಡಿದೆ.</p>.<p>ರಸ್ತೆ ವಿಸ್ತರಣೆ, ರಸ್ತೆ ವಿಭಜಕ ನಿರ್ಮಾಣ, ಚರಂಡಿ ಮೇಲೆ ಸಿಮೆಂಟ್ ಕಾಂಕ್ರೀಟ್ ನಿರ್ಮಿಸುವುದು ಎಲ್ಲ ಕೆಲಸ ಎಲ್ಲವನ್ನೂ ಮಾಡಲಾಗಿದೆ. ಪೊಲೀಸರು ಆಗಾಗ, ಗುಂಡಿಯ ಸುತ್ತಲೂ ಬ್ಯಾರಿಕೇಡ್ ಹಾಕಿ ಅಪಘಾತವಾಗದಂತೆ ನೋಡಿ ಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಈ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಐದಡಿ ಆಳದ ಈ ಗುಂಡಿಯಲ್ಲಿ ಈ ವೃತ್ತ ತಿರು ಗುವಾಗ ಅನೇಕ ವಾಹನ ಬಿದ್ದಿವೆ. ಅನೇಕರು ಕೈಕಾಲು ಮುರಿದು ಕೊಂಡಿದ್ದಾರೆ.</p>.<p>‘ಈ ಭಾಗದ ನಿವಾಸಿಗಳು, ವ್ಯಾಪಾ ರಸ್ಥರು, ಅಂಗಡಿಯವರು ಅನೇಕ ಸಲ ಶಾಸಕರು, ಪಾಲಿಕೆ ಅಧಿಕಾರಿಗಳಿಗೆ ಖುದ್ದಾಗಿ ಭೇಟಿಯಾಗಿ, ಗಟಾರ ಬಾಯಿ ಮುಚ್ಚಲು ಮನವಿ ಮಾಡಿದರೂ ಯಾರೂ ಕಾಳಜಿ ವಹಿಸಿಲ್ಲ’ ಎಂದು ವಾಹನಗಳ ಬಿಡಿಭಾಗಗಳ ಮಾರಾಟಗಾರ ಕುತುಬುದ್ದೀನ್ ಶೇಖ್ ವಿಷಾದ ವ್ಯಕ್ತಪಡಿಸಿದರು.</p>.<p>ವರ್ಷದ ಹಿಂದೆ, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಇಲ್ಲಿ ಸೇತುವೆ ನಿರ್ಮಿಸಲಾಗಿದೆ. ಆಗ ಈ ಸೇತುವೆ ಜತೆಗೇ ಈ ತೆರೆದ ಗಟಾರವನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು, ಗುತ್ತಿಗೆದಾರರು ಭರವಸೆ ನೀಡಿದ್ದರು. ನಂತರ ಯಾರೂ ಸ್ಪಂದಿಸಲಿಲ್ಲ ಎಂದು ಟೈಯರ್ ಮಾರಾಟಗಾರರ ಅಮೀರ್ ಪಠಾಣ ಹೇಳಿದರು.</p>.<p>ತರಕಾರಿ ಮಾರುಕಟ್ಟೆಗೆ ಬರುವ ರೈತರು, ಟೆಂಪೊ ಮಾಲೀಕರು, ಚಾಲಕರು ಸೇರಿ ವಿವಿಧ ಅಂಗಡಿಗಳಿಂದ ಇಲ್ಲಿ ಚಹಾ ಕುಡಿಯಲು ಬರುತ್ತಾರೆ. ಗುಂಡಿಯಿಂದ ದುರ್ವಾಸನೆ ಬರುತ್ತದೆ. ಮಾಲಿನ್ಯ ಉಂಟಾಗುತ್ತಿದೆ ಎಂದು ರೈತ ಜಗದೀಶ ಪಾಟೀಲ ತಿಳಿಸಿದರು.</p>.<p>*</p>.<p>ಕೇವಲ ₹1 ಸಾವಿರದಲ್ಲಿ ಮುಚ್ಚಬಹುದಾಗಿರುವ ಈ ಗುಂಡಿ ಹಾಗೇ ಬಿಟ್ಟಿರುವುದ ರಿಂದ ನಿತ್ಯ ಅಪಘಾತ ಸಂಭವಿಸುತ್ತಿವೆ. ಬೇಗ ಗುಂಡಿ ಮುಚ್ಚಿ ಅಪಘಾತ ತಡೆಯಬೇಕು.</p>.<p><em><strong>–ಅಮೀರ್ ಪಠಾಣ, ವ್ಯಾಪಾರಸ್ಥರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>